
Yakshagana: ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರಕಟ
Friday, November 10, 2023
ಉಡುಪಿ, ನ.10 (ಲೋಕಬಂಧು ವಾರ್ತೆ): ಪ್ರತಿವರ್ಷ ಯಕ್ಷಗಾನ ಕಲಾರಂಗ ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ಸಾಧಕ ಕಲಾವಿದರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ತೆಂಕು ಹಾಗೂ ಬಡಗುತಿಟ್ಟಿನ 21 ಮಂದಿ ಹಿರಿಯ ಯಕ್ಷಗಾನ ಕಲಾವಿದರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಯಕ್ಷಚೇತನ ಪ್ರಶಸ್ತಿಯನ್ನು ಸಂಸ್ಥೆಯ ಹಿರಿಯ ಕಾರ್ಯಕರ್ತ ವಿಜಯಕುಮಾರ್ ಮುದ್ರಾಡಿ ಅವರಿಗೆ ನೀಡಲಾಗುವುದು.ಪ್ರಶಸ್ತಿ ಪುರಸ್ಕೃತರ ವಿವರ
ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ- ಚಿದಂಬರ ಬಾಬು ಕೋಣಂದೂರು ಶಿವಮೊಗ್ಗ, ಪ್ರೊ. ಬಿ. ವಿ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ- ಎಚ್. ಗೋವಿಂದ ಉರಾಳ ಕೋಟ, ನಿಟ್ಟೂರು ಸುಂದರ ಶೆಟ್ಟಿ ಮಹೇಶ ಡಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ- ವಸಂತ ಶೆಟ್ಟಿ ಮುಂಡ್ಕೂರು, ಬಿ. ಜಗಜ್ಜೀವನದಾಸ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ- ಕೆ. ಎಸ್. ಶಿವಶಂಕರ ಭಟ್ ತೀರ್ಥಹಳ್ಳಿ, ಕೆ. ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ- ಸಂಜೀವ ಕೊಠಾರಿ ಬೈಂದೂರು, ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿ- ಸೀತೂರು ಎಚ್. ಎಸ್. ಅನಂತಪದ್ಮನಾಭ ರಾವ್ ಚಿಕ್ಕಮಗಳೂರು, ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿ- ಗಣಪತಿ ಭಾಗ್ವತ ಕಂವಾಳೆ ಯಲ್ಲಾಪುರ, ಮಾರ್ವಿ ರಾಮಕೃಷ್ಣ ಹೆಬ್ಬಾರ ಮಾರ್ವಿ ವಾದಿರಾಜ ಹೆಬ್ಬಾರ ಸ್ಮರಣಾರ್ಥ ಪ್ರಶಸ್ತಿ- ಎಂ. ರಘುರಾಮ ಮಡಿವಾಳ ಮಂದಾರ್ತಿ, ಶಿರಿಯಾರ ಮಂಜು ನಾಯ್ಕ ಸ್ಮರಣಾರ್ಥ ಪ್ರಶಸ್ತಿ- ಕೋಡಿ ವಿಶ್ವನಾಥ ಗಾಣಿಗ ಹಾಲಾಡಿ, ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿ- ಅಶೋಕ ಭಟ್ಟ ಸಿದ್ದಾಪುರ (ಉ.ಕ)., ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ಪ್ರಶಸ್ತಿ- ಸುಬ್ರಾಯ ನಾರಾಯಣ ಭಂಡಾರಿ ಗುಣವಂತೆ, ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿ- ವಿಠಲ ಕುಲಾಲ ಚೋರಾಡಿ, ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿ- ವೈ. ವಾಸುದೇವ ರಾವ್ ಎರ್ಮಾಳು, ಐರೋಡಿ ರಾಮ ಗಾಣಿಗ ಸ್ಮರಣಾರ್ಥ ಪ್ರಶಸ್ತಿ- ಪ್ರಭಾಕರ ಹೆಗಡೆ ಈಚಲಕೊಪ್ಪ ಸಾಗರ, ಮಾನ್ಯ ತಿಮ್ಮಯ್ಯ ಸ್ಮರಣಾರ್ಥ ಪ್ರಶಸ್ತಿ- ಮಧೂರು ರಾಧಾಕೃಷ್ಣ ನಾವಡ ಕಾಸರಗೋಡು, ಎಚ್. ಪರಮೇಶ್ವರ ಐತಾಳ್ ಸ್ಮರಣಾರ್ಥ ಪ್ರಶಸ್ತಿ- ರತ್ನಾಕರ ಆಚಾರ್ಯ ಪಡುಬಿದ್ರೆ, ಕಡಂದೇಲು ಪುರುಷೋತ್ತಮ ಭಟ್ ಪ್ರಶಸ್ತಿ- ಗುಂಡಿಮಜಲು ಗೋಪಾಲ ಭಟ್ಟ ಬಂಟ್ವಾಳ, ಕಡತೋಕ ಕೃಷ್ಣ ಭಾಗವತ ಪ್ರಶಸ್ತಿ - ತ್ರ್ಯಂಬಕ ಹೆಗಡೆ ಇಡುವಾಣಿ ಸಾಗರ, ಬಿ. ಪಿ. ಕರ್ಕೇರ ಪ್ರಶಸ್ತಿ- ಸಿದ್ಧಕಟ್ಟೆ ಶ್ರೀ ಸದಾಶಿವ ಶೆಟ್ಟಿಗಾರ್ ಬೆಳ್ತಂಗಡಿ, ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ- ಎನ್. ವಸಂತ ಗೌಡ ಕಾರ್ಯತ್ತಡ್ಕ, ಬೆಳ್ತಂಗಡಿ ಪ್ರಭಾವತಿ ವಿ. ಶೆಣೈ ಯು. ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ- ಶ್ರೀಧರ ಪೂಜಾರಿ ಪಂಜಾಜೆ ಬಂಟ್ವಾಳ.
ಯಕ್ಷಚೇತನ ಪ್ರಶಸ್ತಿ ಹೊರತುಪಡಿಸಿ ಉಳಿದೆಲ್ಲಾ ಪ್ರಶಸ್ತಿ ತಲಾ 20 ಸಾವಿರ ರೂ. ನಗದು ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ನ. 18ರಂದು ಕಟೀಲು ಶ್ರೀ ಸರಸ್ವತಿ ಸದನದಲ್ಲಿ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.