-->
ಆಶಾ ಮಾಳವೀಯ ಸೈಕಲ್ ಯಾತ್ರೆಗೆ ಸಿಎಂ ಶುಭಾಶಯ

ಆಶಾ ಮಾಳವೀಯ ಸೈಕಲ್ ಯಾತ್ರೆಗೆ ಸಿಎಂ ಶುಭಾಶಯ

ಆಶಾ ಮಾಳವೀಯ ಸೈಕಲ್ ಯಾತ್ರೆಗೆ ಸಿಎಂ ಶುಭಾಶಯ

ಲೋಕಬಂಧುನ್ಯೂಸ್ ಡೆಸ್ಕ್, ಬೆಂಗಳೂರು

ಪರ್ವತಾರೋಹಿ ಹಾಗೂ ರಾಷ್ಟ್ರ ಮಟ್ಟದ ಮಹಿಳಾ ಕ್ರೀಡಾಪಟು ಆಶಾ ಮಾಳವೀಯ ಸಾಧನೆ ಮತ್ತು ಅವರು ಹಮ್ಮಿಕೊಂಡಿರುವ 28 ರಾಜ್ಯಗಳ ಸೈಕಲ್ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದರು.
ಪರ್ವತಾರೋಹಿಯಾಗಿ ಹಲವು ದಾಖಲೆ ನಿರ್ಮಿಸಿರುವ ಮಧ್ಯಪ್ರದೇಶದ ಯುವತಿ ಆಶಾ ಮಾಳವೀಯ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಸ್ತ್ರೀ ಸಬಲೀಕರಣ ಹಾಗೂ ಸ್ತ್ರೀ ಸುರಕ್ಷತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ದೇಶದ 28 ರಾಜ್ಯ ಒಳಗೊಂಡಂತೆ ಒಟ್ಟು 25 ಸಾವಿರ ಕಿ.ಮೀ ಸೈಕಲ್‌ ಯಾತ್ರೆ ನಡೆಸುತ್ತಾ ಅದರ ಭಾಗವಾಗಿ ಕರ್ನಾಟಕಕ್ಕೆ ಬಂದಿರುವುದನ್ನು ವಿವರಿಸಿದರು.


ತಮ್ಮ ಜಾಗೃತಿ ಅಭಿಯಾನದ ಭಾಗವಾಗಿ ಬೆಂಗಳೂರಿಗೆ ಆಗಮಿಸಿದ ಆಶಾ ಅವರನ್ನು  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಆಶಾ ಸಾಧನೆಯನ್ನು ಮುಖ್ಯಮಂತ್ರಿಗೆ ವಿವರಿಸಿದರು.


ಅಭಿಯಾನದ ಉದ್ದೇಶವನ್ನು ಶ್ಲಾಘಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಪ್ರಯಾಣಕ್ಕೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಸಚಿವ ಬೈರತಿ ಸುರೇಶ್ ಇದ್ದರು.

Ads on article

Advertise in articles 1

advertising articles 2

Advertise under the article