-->
ಉಚ್ಚಿಲ ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ವಾಹನ ಹಸ್ತಾಂತರ

ಉಚ್ಚಿಲ ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ವಾಹನ ಹಸ್ತಾಂತರ

ಲೋಕಬಂಧುನ್ಯೂಸ್ ಡೆಸ್ಕ್, ಪಡುಬಿದ್ರಿ
ಕರ್ಣಾಟಕ ಬ್ಯಾಂಕಿನ ಸಿ.ಎಸ್.ಆರ್ ನಿಧಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಲಾದ 5,20,750 ರೂ. ಮೊತ್ತದ 6 ಆಸನಗಳುಳ್ಳ ವಿದ್ಯುತ್ ಚಾಲಿತ ವಾಹನವನ್ನು ಗುರುವಾರ ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.
ಶ್ರೀ ದೇವಳದ ಜೀರ್ಣೋದ್ಧಾರದ ರೂವಾರಿ ಹಾಗೂ ಗೌರವ ಸಲಹೆಗಾರ ನಾಡೋಜ ಡಾ.ಜಿ. ಶಂಕರ್‌ ಅವರಿಗೆ ಕರ್ಣಾಟಕ ಬ್ಯಾಂಕಿನ ಉಡುಪಿ ವಿಭಾಗಾಧಿಕಾರಿ ವಾದಿರಾಜ ಭಟ್ ವಾಹನದ ಕೀಲಿಕೈ ಹಸ್ತಾಂತರಿಸಿದರು.
ಅದಕ್ಕೂ ಮುನ್ನ ದೇವಳದ ಅರ್ಚಕ ವಿಷ್ಣುಮೂರ್ತಿ ಭಟ್‌ ವಾಹನದ ಪೂಜಾ ವಿಧಿ ವಿಧಾನ ನೆರವೇರಿಸಿದರು.
ನಾಡೋಜ ಡಾ. ಜಿ. ಶಂಕರ್‌ ಮಾತನಾಡಿ, ಉಚ್ಚಿಲ ದಸರಾ ಸಂದರ್ಭ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಈ ಉಪಯೋಗವಾಗಲಿದೆ. ಕರ್ಣಾಟಕ ಬ್ಯಾಂಕಿನ ಸಂಬಂಧ ಮಹಾಲಕ್ಷ್ಮೀ ದೇವಸ್ಥಾನದೊಂದಿಗೆ ಉತ್ತಮವಾಗಿದ್ದು, ಇಂಥ ಕಾರ್ಯಗಳಿಂದ ಸಂಬಂಧ ಇನ್ನಷ್ಟು ಹೆಚ್ಚಾಗಲಿದೆ ಎಂದರು.
ಬ್ಯಾಂಕಿನ ಡಿಜಿಎಂ ವಾದಿರಾಜ ಭಟ್‌ ಮಾತನಾಡಿ, ಬ್ಯಾಂಕಿನ ಸಿಎಸ್‌ಆರ್‌ ಯೋಜನೆಯಡಿ ವಿದ್ಯುತ್ ಚಾಲಿತ ವಾಹನ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗುಂಡು ಬಿ. ಅಮೀನ್, ವಿನಯ್ ಕರ್ಕೇರ, ಗಿರಿಧರ ಸುವರ್ಣ, ಮೋಹನ್ ಬೆಂಗ್ರೆ, ಶರಣ್ ಮಟ್ಟು, ಸುಧಾಕರ ಕುಂದರ್, ಸುಭಾಶ್ಚಂದ್ರ ಕಾಂಚನ್, ನಾರಾಯಣ ಕರ್ಕೇರ, ಸುಜಿತ್ ಸಾಲ್ಯಾನ್ ಮೂಲ್ಕಿ, ಪುಂಡಲೀಕ ಹೊಸಬೆಟ್ಟು, ರವೀಂದ್ರ ಶ್ರೀಯಾನ್, ನಾರಾಯಣ ಕುಂದರ್ ಕಲ್ಮಾಡಿ, ಮೋಹನ ಬಂಗೇರ ಕಾಪು, ವಿಠಲ ಕರ್ಕೇರ, ಸುಧಾಕರ ಸುವರ್ಣ ಉಚ್ಚಿಲ, ಸುಗುಣಾ ಕರ್ಕೇರ, ಕರ್ಣಾಟಕ ಬ್ಯಾಂಕ್ ಮಹಾ‌ಪ್ರಬಂಧಕ ಮನೋಜ್‌ ಕೋಟ್ಯಾನ್, ಅಂಬಾಗಿಲು ಶಾಖಾ ಪ್ರಬಂಧಕ‌ ಶಶಿಕಾಂತ ಬಂಗೇರ, ದೇವಳದ ವ್ಯವಸ್ಥಾಪಕ ಸತೀಶ್ ಅಮೀನ್‌ ಪಡುಕೆರೆ ಮೊದಲಾದವರಿದ್ದರು.

Ads on article

Advertise in articles 1

advertising articles 2

Advertise under the article