ಮೂವರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ
Wednesday, May 28, 2025
ಲೋಕಬಂಧು ನ್ಯೂಸ್, ಮಂಗಳೂರು
ಮನೆ ನಿವೇಶನದಲ್ಲಿದ್ದ ಕಟ್ಟಡ ಕಲ್ಲು ತೆರವಿಗೆ ಅನುಮತಿ ಪತ್ರ ನೀಡಲು ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ದ.ಕ. ಗಣಿ ಇಲಾಖೆ ಉಪ ನಿರ್ದೇಶಕಿ ಕೃಷ್ಣವೇಣಿ, ಸಿಬ್ಬಂದಿ ಪ್ರದೀಪ್ ಮತ್ತು ಕಾರು ಚಾಲಕ ಮಧು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಇರಾ ಗ್ರಾಮದಲ್ಲಿ ಮನೆ ಕಟ್ಟುವ ಜಾಗದಲ್ಲಿದ್ದ ಕಲ್ಲು ತೆರವಿಗೆ ಕೃಷ್ಣವೇಣಿ ಅರ್ಜಿದಾರರಿಗೆ 50 ಸಾವಿರ ರೂ. ಲಂಚ ಕೇಳಿದ್ದರು.
ಇಲ್ಲಿನ ಮಲ್ಲಿಕಟ್ಟೆಯ ಭೂವಿಜ್ಞಾನ ಇಲಾಖೆ ಕಚೇರಿಯಲ್ಲಿ ಕಾರು ಚಾಲಕ ಮಧು ಎಂಬಾತ ದೂರುದಾರರಿಂದ ಹಣ ಸ್ವೀಕರಿಸುವ ವೇಳೆ ರೆಡ್ಹ್ಯಾಂಡ್ ಆಗಿ ಹಿಡಿದು ಸದ್ಯ ಮೂವರನ್ನೂ ಬಂಧಿಸಲಾಗಿದೆ.