-->
ಯಡತೊರೆ ಶ್ರೀ ಧರ್ಮಸ್ಥಳ ಭೇಟಿ

ಯಡತೊರೆ ಶ್ರೀ ಧರ್ಮಸ್ಥಳ ಭೇಟಿ

ಲೋಕಬಂಧು ನ್ಯೂಸ್, ಬೆಳ್ತಂಗಡಿ
ಮೈಸೂರು ಜಿಲ್ಲೆ ಕೃಷ್ಣರಾಜ ನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರಭಾರತೀ ಮಹಾಸ್ವಾಮೀಜಿ ಜೂ.11ರಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಸೇವೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.
ಕ್ಷೇತ್ರದ ವತಿಯಿಂದ ಡಿ. ಹರ್ಷೇಂದ್ರಕುಮಾ‌ರ್ ಸಕಲ ಗೌರವಗಳೊಂದಿಗೆ ಶ್ರೀಗಳನ್ನು ಭಕ್ತಿ ಗೌರವದಿಂದ ಸ್ವಾಗತಿಸಿ, ಬರಮಾಡಿಕೊಂಡರು.


ಶ್ರೀಗಳು ತಮ್ಮ ಸಂಚಾರದ ಉದ್ದೇಶ ಹಾಗೂ ಮುಂದಿನ ಯೋಜನೆಗಳ ಕುರಿತು ಮಾತುಕತೆ ನಡೆಸಿದರು.


ಕ್ಷೇತ್ರದ ವತಿಯಿಂದ ಫಲಕಾಣಿಕೆ ಸಲ್ಲಿಸಿ, ಪಾದಪೂಜೆ ನೆರವೇರಿಸಲಾಯಿತು.


ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಕ್ಷೇತ್ರದ ಅರ್ಚಕ ವೃಂದ, ಸಿಬ್ಬಂದಿ ಉಪಸ್ಥಿತರಿದ್ದರು.
ಶ್ರೀ ಮಠದ ವೇದಾಂತ ಭಾರತಿ ನಿರ್ದೇಶಕ ಶ್ರೀಧರ ಹೆಗಡೆ, ವೆಂಕಟ್ರಮಣ ಭಟ್, ಶ್ರೀಧರ ಭಟ್ ಐನಕೈ, ದಿನೇಶ್ ಹೆಗಡೆ, ವೆಂಕಟೇಶ ಗೋಖಲೆ, ಮಹೇಶ ಗೋಖಲೆ ಮತ್ತು ಡಾ.ಶ್ರೀಧರ ಭಟ್ ಇದ್ದರು.

Ads on article

Advertise in articles 1

advertising articles 2

Advertise under the article