
ಲತಾಂಗಿ ಪ್ರಸ್ತುತಿ ಕಾರ್ಯಕ್ರಮ
Thursday, September 5, 2024
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ರಂಜನಿ ಮೆಮೋರಿಯಲ್ ಟ್ರಸ್ಟ್ ಉಡುಪಿ ವತಿಯಿಂದ ಕುಂಜಿಬೆಟ್ಟು ಶಾರದಾ ಮಂಟಪ ಬಳಿಯ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ನಡೆಯುತ್ತಿರುವ ನವದಿನ ಸಂಗೋತೋತ್ಸವದಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಲತಾಂಗಿ ಪ್ರಸ್ತುತಿ ಎಂಬ ವಿನೂತನ ಕಾರ್ಯಕ್ರಮ ನಡೆಯಿತು.
ಸುರತ್ಕಲ್ ಶ್ರೇಯ ಕೊಳತ್ತಾಯ, ಬೆಂಗಳೂರಿನ ಅದಿತಿ ಪ್ರಹ್ಲಾದ್ ಮತ್ತು ಸ್ಮೃತಿ ಭಾಸ್ಕರ್, ಕಾರ್ಕಳದ ಆತ್ರೇಯಿ ಕೃಷ್ಣ, ಉಡುಪಿಯ ಅರ್ಚನಾ ಮತ್ತು ಸಮನ್ವಿ ಕಾರ್ಯಕ್ರಮ ನಡೆಸಿಕೊಟ್ಟರು.
ಮೈಸೂರಿನ ಶೃತಿ ಸಿ. ವಿ. ವಯಲಿನ್ ನಲ್ಲಿ, ಬೆಂಗಳೂರಿನ ಅನಿರುದ್ಧ ಭಟ್ ಮೃದಂಗ ಮತ್ತು ಅನಿಲ್ ಪರಾಶರ ಖಂಜಿರದಲ್ಲಿ ಸಹಕರಿಸಿದರು.