ಲೋಕಬಂಧುನ್ಯೂಸ್ ಡೆಸ್ಕ್, ಮೂಡುಬಿದಿರೆ
ಸ್ಥಳೀಯ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ನಡೆಯಿತು.
ಎ ಜಿ ಸೋನ್ಸ್ ಐಟಿಐ ನಿವೃತ್ತ ಪ್ರಾಂಶುಪಾಲ ಜಯರಾಮ ಶೆಟ್ಟಿಗಾರ್ ಕಾರ್ಯಕ್ರಮ ಉದ್ಘಾಟಿಸಿದರು.
ವಿಶ್ರಾಂತ ಶಿಕ್ಷಕರಾದ ಜಯರಾಮ ಶೆಟ್ಟಿಗಾರ್ ಹಾಗೂ ರಾಯಿ ರಾಜಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಶಾಲಾ ಶಿಕ್ಷಕ ಮಹಾವೀರ ಎಂ., ಸುನೀತಾ ತೆರೇಸಾ ಪಿಂಟೊ ಮತ್ತು ಅಲ್ವಿರಾ ರೇಷ್ಮಾ, ಬ್ಯಾಂಕ್ ಶಾಖಾಧಿಕಾರಿ ಸಂಧ್ಯಾ, ಸೌಮ್ಯ, ಪ್ರಶಾಂತ್ ಇದ್ದರು.