-->
ನಟ ಕಮಲ್ ಕ್ಷಮೆಗೆ ಆಗ್ರಹ

ನಟ ಕಮಲ್ ಕ್ಷಮೆಗೆ ಆಗ್ರಹ

ಲೋಕಬಂಧು ನ್ಯೂಸ್, ಉಡುಪಿ
ತಮಿಳು ನಟ ಕಮಲ್ ಹಾಸನ್ `ಥಗ್ ಲೈಫ್' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ `ನಿಮ್ಮ ಕನ್ನಡ ನಮ್ಮ ತಮಿಳಿನಿಂದ ಹುಟ್ಟಿದ್ದು' ಎಂಬ ಹೇಳಿಕೆ ನೀಡಿದ್ದು, ಈ ಹೇಳಿಕೆ ಕೋಟ್ಯಂತರ ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುವಂತಿದೆ. ಆದ್ದರಿಂದ ಕಮಲ್ ಹಸನ್ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಅನ್ಸಾರ್ ಅಹಮದ್ ಆಗ್ರಹಿಸಿದ್ದಾರೆ.ಓರ್ವ ಜವಾಬ್ದಾರಿಯುತ ನಟನಿಗೆ ಈ ರೀತಿಯ ಹೇಳಿಕೆಗಳು ಶೋಭೆ ತರುವಂಥದಲ್ಲ. ನಟ ಕಮಲ್ ಹಾಸನ್ ಕೂಡಲೇ ತನ್ನ ಮಾತು ಹಿಂಪಡೆದು ಕನ್ನಡಿಗರ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಅವರ `ಥಗ್ ಲೈಫ್' ಚಿತ್ರ ಪ್ರದರ್ಶಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Ads on article

Advertise in articles 1

advertising articles 2

Advertise under the article