
ಮಿಜೊರಾಂ ಮಾಜಿ ರಾಜ್ಯಪಾಲ ನಿತ್ಯಾನಂದ ಮಂದಿರ ಭೇಟಿ
Friday, May 30, 2025
ಲೋಕಬಂಧು ನ್ಯೂಸ್, ಉಡುಪಿ
ಮಿಜೋರಾಂ ರಾಜ್ಯದ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಶುಕ್ರವಾರ ಇಲ್ಲಿನ ಕವಿ ಮುದ್ದಣ ಮಾರ್ಗದಲ್ಲಿರುವ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಮಂದಿರಕ್ಕೆ ಭೇಟಿ ನೀಡಿ ಗುರುದೇವರ ದರ್ಶನ ಪಡೆದರು.
ಸನ್ನಿಧಾನದಿಂದ ಶ್ರೀ ಗುರುದೇವರ ಪ್ರಸಾದ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಂದಿರದ ವ್ಯವಸ್ಥಾಪಕ ಸುರೇಂದ್ರ ಶೆಟ್ಟಿ ಕೊರಂಗ್ರಪಾಡಿ, ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್, ಅರ್ಚಕ ಅಮಿತ್ ಶುಕ್ಲಾ, ತಾರಾನಾಥ್ ಮೇಸ್ತ ಶಿರೂರು, ವಿಶ್ವನಾಥ್ ತೊಟ್ಟಂ ಮೊದಲಾದವರಿದ್ದರು.