
ಎಚ್ಎಸ್.ವಿ ನಿಧನಕ್ಕೆ ಪೇಜಾವರ ಶ್ರೀ ಸಂತಾಪ
Friday, May 30, 2025
ಲೋಕಬಂಧು ನ್ಯೂಸ್, ಉಡುಪಿ
ಕನ್ನಡ ಸಾರಸ್ವತ ಲೋಕದ ಧೀಮಂತರಲ್ಲಿ ಓರ್ವರಾದ ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ನೂರಾರು ಭಾವಪೂರ್ಣ ಕವನಗಳ ಮೂಲಕ ಕೋಟ್ಯಂತರ ಕನ್ನಡಿಗರ ಮನೆ ಮನಸ್ಸುಗಳಲ್ಲಿ ಸ್ಥಾಯಿಯಾದ ಸ್ಥಾನ ಪಡೆದಿದ್ದಾರೆ. ಕೃಷ್ಣ ಪರಮಾತ್ಮನ ಬಗೆಗೂ ಮನೋಜ್ಞವೂ ಲಾಲಿತ್ಯಪೂರ್ಣವೂ ಆಗಿರುವ ಅವರ ಹಲವು ಕವನಗಳು ಕೃಷ್ಣ ಭಕ್ತರ ಅಪಾರ ಪ್ರಶಂಸೆಗೆ ಪಾತ್ರವಾಗಿರುವುದು ಅವರ ಸಾಹಿತ್ಯ ಪ್ರಗಲ್ಭತೆ ಮತ್ತು ದೈವನಿಷ್ಠೆಗೆ ಸಾಕ್ಷಿ.
ಶ್ರೀಮಠ ಮತ್ತು ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರೊಂದಿಗೂ ಅನೇಕ ವರ್ಷಗಳ ಆತ್ಮೀಯ ಬಾಂಧವ್ಯ ಹೊಂದಿದ್ದರು.
ಗುರುಗಳ ಪರ್ಯಾಯ ಕಾಲದಲ್ಲಿ ಹಮ್ಮಿಕೊಳ್ಳುತ್ತಿದ್ದ ಕವಿಗೋಷ್ಠಿಗಳಲ್ಲೂ ಭಾಗವಹಿಸಿದ್ದನ್ನು ಸ್ಮರಿಸುವುದಾಗಿ ತಿಳಿಸಿದ ಶ್ರೀಪಾದರು, ಶ್ರೀಕೃಷ್ಣ ಪರಮಾತ್ಮ ಅವರಿಗೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಶ್ರೀಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.