-->
ಶರಣ್ ಪಂಪ್‌ವೆಲ್‌ಗೆ ಜಾಮೀನು ಮಂಜೂರು

ಶರಣ್ ಪಂಪ್‌ವೆಲ್‌ಗೆ ಜಾಮೀನು ಮಂಜೂರು

ಲೋಕಬಂಧು ನ್ಯೂಸ್, ಮಂಗಳೂರು
ಸುಹಾಸ್‌ ಶೆಟ್ಟಿ ಹತ್ಯೆ ಸಂದರ್ಭ ಬಂದ್‌ಗೆ ಕರೆ ನೀಡಿದ್ದ ಘಟನೆ ಸಂಬಂಧ ಮಂಗಳವಾರ ರಾತ್ರಿ ಬಂಧನವಾಗಿದ್ದ ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್‌ವೆಲ್‌ಗೆ ಮಂಗಳೂರಿನ ಕೋರ್ಟ್ ಜಾಮೀನು ಮಂಜೂರು ಮಾಡಿದೆ.ಬಂಟ್ವಾಳದಲ್ಲಿ ರಹೀಂ ಹತ್ಯೆ ಬಳಿಕ ಪೊಲೀಸರು ಶರಣ್ ಪಂಪ್‌ವೆಲ್‌ನನ್ನು ಬಂಧಿಸಿ ನಂತರ ಬೋಂದೆಲ್‌ನಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದರು.


ವಿಚಾರಣೆ ನಡೆಸಿದ ನ್ಯಾಯಾಧೀಶರು ಪಂಪ್‌ವೆಲ್‌ಗೆ ಜಾಮೀನು ಮಂಜೂರು ಮಾಡಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದರು.


ಪೊಲೀಸರು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಶರಣ್ ಬಿಡುಗಡೆಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article