-->
ಜಾಗೃತಿಯೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆ

ಜಾಗೃತಿಯೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆ

ಲೋಕಬಂಧು ನ್ಯೂಸ್, ಉಡುಪಿ
ಮಣಿಪಾಲ ಕೆಎಂಸಿ ಮತ್ತು ಆಸ್ಪತ್ರೆ ವತಿಯಿಂದ ಶನಿವಾರ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಸಾರ್ವಜನಿಕ ಜಾಗೃತಿ ಮೂಲಕ ಆಚರಿಸಲಾಯಿತು.ಉಸಿರಾಟ, ಮನೋವೈದ್ಯ ಶಾಸ್ತ್ರ ಮತ್ತು ಇಎನ್.ಟಿ ವಿಭಾಗಗಳ ವೈದ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದು, ಎಲ್ಲಾ ರೀತಿಯ ತಂಬಾಕಿನಿಂದ ದೂರವಿರುವುದಾಗಿ ಮತ್ತು ಅದರ ಪ್ರತಿಕೂಲ ಆರೋಗ್ಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿ ಪ್ರತಿಜ್ಞೆ ಮಾಡಿದರು.


ಉಸಿರಾಟದ ವೈದ್ಯಕೀಯ ವಿಭಾಗದ ಸ್ನಾತಕೋತ್ತರ ವೈದ್ಯೆಯರಾದ ಡಾ. ದೀಕ್ಷಾ ಸುರೇಶ್ ಮತ್ತು ಡಾ.ಶೋಭಿತಾ ಕೃಷ್ಣನ್ ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ತಿಳಿಸಿದರು.


ಸಭೆಯನ್ನುದ್ದೇಶಿಸಿ ಮಾತನಾಡಿದ ಉಸಿರಾಟದ ಔಷಧ ವಿಭಾಗದ ಮುಖ್ಯಸ್ಥ ಡಾ. ಮನು ಮೋಹನ್ ಕೆ., ತಂಬಾಕು ಬಳಕೆ ಮತ್ತು ಸಮಾಜದ ಮೇಲೆ ಅದರ ಹಾನಿಕಾರಕ ಪರಿಣಾಮವನ್ನು ಕಡಿಮೆ ಮಾಡಲು ನಿರಂತರ ಶಿಕ್ಷಣ, ಬಲವಾದ ನಿಯಂತ್ರಕ ಕ್ರಮಗಳ ಬಗ್ಗೆ ವಿವರಿಸಿದರು.


ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಇದ್ದರು.

Ads on article

Advertise in articles 1

advertising articles 2

Advertise under the article