ಜೈನಕಾಶಿಯಲ್ಲಿ ಗುಲಾಬ್ ಭೂಷಣ್ ಮಹಾರಾಜ್ ಚಾತುರ್ಮಾಸ್ಯ
Thursday, June 19, 2025
ಲೋಕಬಂಧು ನ್ಯೂಸ್, ಮೂಡುಬಿದಿರೆ
ಕಂಥುಸಾಗರ್ ಮಹಾರಾಜರಿಂದ ಆಚಾರ್ಯ ಪದವಿ ಪಡೆದ ಜ್ಞಾನಿ, ಆಚಾರ್ಯ 108 ಗುಲಾಬ್ ಭೂಷಣ್ ಮಹಾರಾಜ್ ಅವರ ಚಾತುರ್ಮಾಸ್ಯ ವ್ರತಾಚರಣೆ ಇಲ್ಲಿನ ಜೈನ ಮಠದಲ್ಲಿ ನಡೆಯಲಿದೆ ಎಂದು ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಜೂ.20ರಂದು ಬೆಳಗ್ಗೆ 8 ಗಂಟೆಗೆ ಮೂಡುಬಿದಿರೆ ಪುರಪ್ರವೇಶ ಮಾಡಲಿರುವ ಮುನಿ ಮಹಾರಾಜರನ್ನು ಸಮಾಜ ಬಾಂಧವರು ಬಡಗುಬಸದಿ ಬಳಿ ಸ್ವಾಗತಿಸಿ, ಮೆರವಣಿಗೆ ಮೂಲಕ ಜೈನ ಮಠಕ್ಕೆ ಬರಮಾಡಿಕೊಳ್ಳುವರು.
ಜುಲೈ 9ರಂದು ಕಲಶ ಪ್ರತಿಷ್ಠೆ ಮೂಲಕ ಚಾತುರ್ಮಾಸ್ಯ ವ್ರತ ಆರಂಭವಾಗಲಿದ್ದು, ನಾಲ್ಕು ತಿಂಗಳ ಕಾಲ ನಡೆಯಲಿದೆ. ಈ ವೇಳೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುದೇಶ್ ಕುಮಾರ್, ಸ್ವಾಗತ ಸಮಿತಿ ಸಂಚಾಲಕ ಬಾಹುಬಲಿ ಪ್ರಸಾದ್, ಉದ್ಯಮಿ ಶೈಲೇಂದ್ರ ಕುಮಾರ್, ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಇದ್ದರು.