-->
ಶಾಸಕ ಸ್ಥಾನ ಅನರ್ಹತೆ ಆದೇಶಕ್ಕೆ ತಡೆ

ಶಾಸಕ ಸ್ಥಾನ ಅನರ್ಹತೆ ಆದೇಶಕ್ಕೆ ತಡೆ

ಲೋಕಬಂಧು ನ್ಯೂಸ್, ಬೆಂಗಳೂರು
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದ ಆದೇಶಕ್ಕೆ ಕರ್ನಾಟಕ ವಿಧಾನಸಭಾ ಸಚಿವಾಲಯ ತಡೆ ನೀಡಿದೆ.ಸಿಬಿಐ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಿ ನೀಡಿದ್ದ ತೀರ್ಪಿಗೆ ತೆಲಂಗಾಣ ಹೈಕೋರ್ಟ್‌ ಜೂ.11ರಂದು ತಡೆ ನೀಡಿ ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು ಮಾಡಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.


ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಮೇ 6ರಂದು ತಾನೇ ಹೊರಡಿಸಿದ್ದ ಶಾಸಕತ್ವ ಅನರ್ಹ ಆದೇಶಕ್ಕೆ ಜೂ.18ರಂದು ತಡೆ ನೀಡಿದ್ದಾರೆ.


ನ್ಯಾಯಾಲಯದ ಮುಂದಿನ ಆದೇಶದ ವರೆಗೆ ಅನರ್ಹ ಆದೇಶಕ್ಕೆ ತಡೆ ಇರಲಿದೆ.

Ads on article

Advertise in articles 1

advertising articles 2

Advertise under the article