
ಕೊಡವೂರು ದೇವಳದ ಪ್ರಧಾನ ಅರ್ಚಕರಾಗಿ ಸೀತಾರಾಮ ಆಚಾರ್ಯ
Tuesday, July 8, 2025
ಲೋಕಬಂಧು ನ್ಯೂಸ್, ಉಡುಪಿ
ಕೊಡವೂರು ಮಹತೋಬಾರ ಶ್ರೀ ಶಂಕರನಾರಾಯಣ ದೇವಳದ ಪ್ರಧಾನ ಅರ್ಚಕರಾಗಿ ಕೊಡವೂರು ಅಗ್ರಹಾರ ನಿವಾಸಿ ವಿದ್ವಾನ್ ಸೀತಾರಾಮ ಆಚಾರ್ಯ ನೇಮಕಗೊಂಡಿದ್ದು, ಈಚೆಗೆ ಅಧಿಕಾರ ಸ್ವೀಕರಿಸಿದರು.
ದೇವಳದ ಪ್ರಧಾನ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿ ಪುತ್ತೂರು ವಾದಿರಾಜ ತಂತ್ರಿ ಹಾಗೂ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರು, ಭಕ್ತ ವೃಂದ ಸದಸ್ಯರು, ಸೇವಾ ಸಮಿತಿ ಸದಸ್ಯರು,ಶ್ರೀದೇವಳದ ಚಾಕರಿ ವರ್ಗದವರು, ಊರ ಹತ್ತು ಸಮಸ್ತರು ಮೊದಲಾದವರಿದ್ದರು.