.jpg)
ಕೃಷ್ಣ ಮಠದಲ್ಲಿ ತಪ್ತ ಮುದ್ರಾಧಾರಣೆ
Sunday, July 6, 2025
ಲೋಕಬಂಧು ನ್ಯೂಸ್, ಉಡುಪಿ
ವೈಷ್ಣವ ಸಂಪ್ರದಾಯದಲ್ಲಿ ವಿಷ್ಣುಭಕ್ತಿಯ ಧ್ಯೋತಕವಾಗಿ ಆಷಾಢ ಏಕಾದಶಿಯಂದು ಮುದ್ರಾಧಾರಣೆ ನಡೆಸಲಾಗುತ್ತದೆ. ರೋಗನಿರೋಧಕ ಶಕ್ತಿ ವರ್ಧನೆಗೆ ಮುದ್ರಾಧಾರಣೆ ಪೂರಕ ಎಂಬ ನಂಬಿಕೆ ಇದೆ.
ಸುದರ್ಶನ ಹೋಮ ನಡೆಸಿ ಹೋಮಾಗ್ನಿಯಲ್ಲಿ ವಿಷ್ಣು ಲಾಂಛನವಾದ ಲೋಹದ ಶಂಖ, ಚಕ್ರ, ಗದೆ, ಪದ್ಮ ಇತ್ಯಾದಿಗಳನ್ನು ಪುರುಷರ ಎದೆ ಮತ್ತು ತೋಳುಗಳಿಗೆ ಹಾಗೂ ಮಹಿಳೆಯರ ತೋಳುಗಳಿಗೆ ಹಾಕಲಾಗುತ್ತದೆ.
ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮೊದಲಿಗೆ ಸ್ವತಃ ಮುದ್ರಾಧಾರಣೆ ಮಾಡಿಕೊಂಡು ಬಳಿಕ ಶಿಷ್ಯ, ಕಿರಿಯ ಯತಿ ಶೀ ಸುಶ್ರೀಂದ್ರತೀರ್ಥ ಶ್ರೀಪಾದರಿಗೆ ಮುದ್ರಾಧಾರಣೆ ಮಾಡಿದರು.