-->
ಶ್ರದ್ಧಾಭಕ್ತಿಯ ಗಣೇಶ ಚತುರ್ಥಿ ಆಚರಣೆ

ಶ್ರದ್ಧಾಭಕ್ತಿಯ ಗಣೇಶ ಚತುರ್ಥಿ ಆಚರಣೆ

ಲೋಕಬಂಧುನ್ಯೂಸ್ ಡೆಸ್ಕ್, ಬೆಂಗಳೂರು
ರಾಜ್ಯಾದ್ಯಂತ ಸಾಂಪ್ರದಾಯಿಕ ಸಡಗರ ಸಂಭ್ರಮದಿಂದ ಶನಿವಾರ ಗಣೇಶ ಚತುರ್ಥಿ ಆಚರಿಸಲಾಯಿತು.
ಮನೆಗಳಲ್ಲಿ, ದೇವಾಲಯಗಳಲ್ಲಿ, ಸಾರ್ವಜನಿಕವಾಗಿ ಮಣ್ಣಿನ ಗಣೇಶನ ತಹರೇವಾರಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜಿಸಲಾಯಿತು.


ಗಣೇಶ ಪ್ರೀತ್ಯರ್ಥವಾಗಿ ಗಣೇಶ ಅಥರ್ವಶೀರ್ಷ, ಗಣೇಶ ಪಂಚರತ್ನ ಇತ್ಯಾದಿಗಳ ಮೂಲಕ ಅಭಿಷೇಕ, ಸ್ತೋತ್ರಗೈದು ಬಗೆಬಗೆಯ ಪತ್ರ ಪುಷ್ಪಗಳನ್ನು ಸಮರ್ಪಿಸಲಾಯಿತು.


ಮೋದಕ, ಕಡುಬು, ಪಂಚಕಜ್ಜಾಯ  ಇತ್ಯಾದಿ ಭಕ್ಷ್ಯಭೋಜ್ಯಗಳನ್ನು ನೈವೇದ್ಯವಾಗಿ ಸಮರ್ಪಿಸಿ, ಸವಿಯೂಟ ಸವಿದರು.


ಹಣ್ಣು ತರಕಾರಿ ಹೂವುಗಳ ಬೆಲೆ ಗಗನಕ್ಕೇರಿದ್ದರೂ ಹಬ್ಬದ ಸಂಭ್ರಮಾಚರಣೆಗೆ ಕುಂದು ಬಂದಿಲ್ಲ.

Ads on article

Advertise in articles 1

advertising articles 2

Advertise under the article