ತನಿಖೆಗೆ ಹಾಜರಾಗುತ್ತೇನೆ
Tuesday, November 5, 2024
ಲೋಕಬಂಧು ನ್ಯೂಸ್, ಹುಬ್ಬಳ್ಳಿ
ಮುಡಾ ಹಗರಣದ ವಿಚಾರಣೆಗಾಗಿ ಲೋಕಾಯುಕ್ತ ಸಂಸ್ಥೆ ನೀಡಿರುವ ನೋಟಿಸ್ ಸಂಬಂಧ ಬುಧವಾರ ಲೋಕಾಯುಕ್ತ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಲೋಕಾಯುಕ್ತ ಸಂಸ್ಥೆ ನೀಡಿರುವ ನೋಟಿಸ್ ಸಂಬಂಧ ಮುಖ್ಯಮಂತ್ರಿ ಸೋಮವಾರದಿಂದ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಕೊನೆಗೂ ಮೌನ ಮುರಿದಿರುವ ಸಿಎಂ, 'ನಾಳೆ ಲೋಕಾಯುಕ್ತ ಕಚೇರಿಗೆ ಹಾಜರಾಗುತ್ತೇನೆ' ಎಂದು ಹೇಳಿ ಶಿಗ್ಗಾವಿಯತ್ತ ಮತ ಪ್ರಚಾರಕ್ಕೆ ತೆರಳಿದರು.