-->
ಕಲಾ ಸಂಘಟನೆಗಳಿಗೆ ಸ್ವಂತ ಜಾಗ ಅಗತ್ಯ

ಕಲಾ ಸಂಘಟನೆಗಳಿಗೆ ಸ್ವಂತ ಜಾಗ ಅಗತ್ಯ

ಲೋಕಬಂಧು ನ್ಯೂಸ್
ಉಡುಪಿ: ರಂಗ ಚಟುವಟಿಕೆಗೆ ಬಳಸುವ ಪರಿಕರಗಳನ್ನು ಸಂರಕ್ಷಿಸಲು ಹಾಗೂ ನಿರ್ವಹಿಸಲು ಕಲಾ ಸಂಘಟನೆಗಳಿಗೆ ಸ್ವಂತ ಜಾಗ ಇರುವುದು ಅವಶ್ಯಕ ಎಂದು ಕಲ್ಮಾಡಿ ಬ್ರಹ್ಮಬೈದೇರುಗಳ ಗರೋಡಿ ಅಧ್ಯಕ್ಷ ಶಶಿಧರ ಎಂ. ಅಮೀನ್‌ ಪ್ರತಿಪಾದಿಸಿದರು.ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬ ಆರನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಫೆಬ್ರವರಿ 28ರಂದು ಮಾತನಾಡಿದರು.


ಸುಮನಸಾ ಸಂಸ್ಥೆ ಕೂಡಾ ದಶಕದ ಹಿಂದಿನಿಂದ ಸ್ವಂತ ಜಾಗಕ್ಕಾಗಿ ಪ್ರಯತ್ನಪಡುತ್ತಾ ಬಂದಿತ್ತು. ಇನ್ನೆರಡು ವರ್ಷಗಳಲ್ಲಿ ಬೆಳ್ಳಿಹಬ್ಬ ಆಚರಿಸುವ ಹೊತ್ತಿಗೆ ಸಂಸ್ಥೆ ಸ್ವಂತ ಜಾಗದಲ್ಲಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.


ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಮಾತನಾಡಿ, ಸರ್ಕಾರ ಬದಲಾಗುವುದು ಸಹಜ. ಕಲಾವಿದನಲ್ಲಿ ಇರುವ ಕಲೆ ಬದಲಾಗುವುದಿಲ್ಲ. ಎಲೆಮರೆಯ ಕಾಯಿಯಂತಿರುವ ಕಲಾವಿದರನ್ನು ಗುರುತಿಸಿ ಗೌರವಿಸಬೇಕು. ಲಾಬಿ ಮಾಡುವವರಿಗೆ, ಹಣ ನೀಡುವವರಿಗೆ ಪ್ರಶಸ್ತಿ ಬರುವುದೇ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಅಜಿತ್‌ ಅಂಬಲಪಾಡಿ ಅವರನ್ನು ರಂಗ ಸನ್ಮಾನ ನೀಡಿ ಗೌರವಿಸಲಾಯಿತು.


ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ನಾರಾಯಣ ಬಲ್ಲಾಳ್‌, ಮಲ್ಪೆ ಉದ್ಯಮಿ ಹರೀಶ್‌ ಶ್ರೀಯಾನ್‌, ಉಪ್ಪೂರು ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ರಾಜು ಪೂಜಾರಿ, ಕೊಡವೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ರಾಜ ಶೇರಿಗಾರ್‌, ತಾಂಗದಗಡಿ ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಮನೋಜ್‌ ಕುಮಾರ್‌, ಗರಡಿಮಜಲು ದುರ್ಗಾಪರಮೇಶ್ವರಿ ಮಾರಿಯಮ್ಮ ಸನ್ನಿಧಿ ಅಧ್ಯಕ್ಷ ದಯಾನಂದ ಪೂಜಾರಿ,  ಸುಮನಸಾ ಕೊಡವೂರು ಸಂಚಾಲಕ ಭಾಸ್ಕರ ಪಾಲನ್‌ ಉಪಸ್ಥಿತರಿದ್ದರು.


ವಿನಯ್‌ ಕಲ್ಮಾಡಿ ಸ್ವಾಗತಿಸಿ, ಅಂಬಿಕಾ ವಂದಿಸಿದರು. ಮುರುಗೇಶ್‌ ಮತ್ತು ಸೌಭಾಗ್ಯ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ಸುಮನಸಾ ಕಲಾವಿದರಿಂದ ವಿದ್ಯುನ್ಮತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.

Ads on article

Advertise in articles 1

advertising articles 2

Advertise under the article