-->
ಪುತ್ತಿಗೆ ಸೋಮನಾಥ ಲಿಂಗ ಪ್ರತಿಷ್ಠೆ

ಪುತ್ತಿಗೆ ಸೋಮನಾಥ ಲಿಂಗ ಪ್ರತಿಷ್ಠೆ

ಲೋಕಬಂಧು ನ್ಯೂಸ್
ಮೂಡುಬಿದಿರೆ: ಸಮಗ್ರ ಜೋರ್ಣೋದ್ಧಾರಗೊಂಡು ಬ್ರಹ್ಮಕುಂಭಾಭಿಷೇಕ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ದ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ, ಅಷ್ಟಬಂಧ ಬ್ರಹ್ಮಕಲಶೋತ್ಸವದ (ಪುತ್ತೆ ಬ್ರಹ್ಮಕಲಶ) ಪ್ರಯುಕ್ತ ಶನಿವಾರ ಹಾಗೂ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಭಾನುವಾರ ಬೆಳಗ್ಗೆ ಶ್ರೀ ಸೋಮನಾಥೇಶ್ವರ ದೇವರ ಲಿಂಗ ಪ್ರತಿಷ್ಠೆ ನಡೆಯಿತು.ದೇವಳದ ಆನುವಂಶೀಯ ಆಡಳಿತ ಮೊಕ್ತೇಸರ ಚೌಟರ ಅರಮನೆಯ ಕುಲದೀಪ ಎಂ., ಬ್ರಹ್ಮ ಕಲಶ ಸಮಿತಿಯ ಪದಾಧಕಾರಿಗಳಾದ ನೀಲೇಶ್ ಶೆಟ್ಟಿ, ಶಿವಪ್ರಸಾದ್ ಆಚಾರ್ಯ, ಅಡಿಗಳ್ ಅನಂತಕೃಷ್ಣ ಭಟ್,, ಧನಲಕ್ಮೀ ಶ್ರೀಪತಿ ಭಟ್, ಎಚ್‌.ಧನಕೀರ್ತಿ ಬಲಿಪ, ವಿದ್ಯಾ ರಮೇಶ್ ಭಟ್, ವಾದಿರಾಜ ಮಡ್ಮಣ್ಣಾಯ ಮೊದಲಾದವರಿದ್ದರು.


ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ 'ಚತುರ್ಜನ್ಮ ಮೋಕ್ಷ' ಯಕ್ಷಗಾನ ಬಯಲಾಟ ನಡೆಯಿತು.

Ads on article

Advertise in articles 1

advertising articles 2

Advertise under the article