-->
ಅಬ್ದುಲ್ ರೆಹಮಾನ್ ಹತ್ಯೆ: ಮತ್ತಿಬ್ಬರ ಸೆರೆ

ಅಬ್ದುಲ್ ರೆಹಮಾನ್ ಹತ್ಯೆ: ಮತ್ತಿಬ್ಬರ ಸೆರೆ

ಲೋಕಬಂಧು ನ್ಯೂಸ್, ಬಂಟ್ವಾಳ
ಈಚೆಗೆ ನಡೆದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದ್ದಾರೆ. ಆ ಮೂಲಕ ಒಟ್ಟು ಐವರ ಬಂಧನವಾದಂತಾಗಿದೆ.ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎನ್ನುವುದು ತನಿಖೆಯಿಂದ ಗೊತ್ತಾಗಿದ್ದರೂ ಹತ್ಯೆಗೆ ನಿಖರ ಕಾರಣ ಏನು ಎನ್ನುವ ಬಗ್ಗೆ ತನಿಖೆ ಮುಂದುವರಿದಿದೆ.


ಬಂಟ್ವಾಳ ಕುರಿಯಾಳ ನಿವಾಸಿ ದೀಪಕ್ (21), ಅಮ್ಮುಂಜೆ ನಿವಾಸಿ ಪೃಥ್ವಿರಾಜ್ (21) ಮತ್ತು ಚಿಂತನ್ (19) ಹಾಗೂ ಇದೀಗ ಸುಮಿತ್ ಮತ್ತು ರವಿರಾಜ್ ಬಂಧಿತ ಆರೋಪಿಗಳು.


ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Ads on article

Advertise in articles 1

advertising articles 2

Advertise under the article