-->
ಸ್ವಂತ ಹಿತಾಸಕ್ತಿಗಾಗಿ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ

ಸ್ವಂತ ಹಿತಾಸಕ್ತಿಗಾಗಿ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ

ಲೋಕಬಂಧು ನ್ಯೂಸ್, ಉಡುಪಿ
ಸಂವಿಧಾನದಲ್ಲಿ ದೇಶದ ರಕ್ಷಣೆಗಾಗಿ ಇರುವ ಅವಕಾಶವನ್ನು ಸ್ವಂತ ಹಿತಾಸಕ್ತಿಗಾಗಿ ಬಳಸಿಕೊಂಡ ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಜೂ.25 ಬುಧವಾರ ನಡೆದ 'ಸಂವಿಧಾನ್​ ಹತ್ಯಾ ದಿವಸ್​' (ತುರ್ತು ಪರಿಸ್ಥಿತಿಯ ಕರಾಳ ದಿನ) ಆಚರಣೆಯಲ್ಲಿ ಮಾತನಾಡಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ 36 ಸಾವಿರ ಮುಖಂಡರನ್ನು ಜೈಲಿಗಟ್ಟಲಾಗಿತ್ತು. ಪೊಲೀಸ್​ ದೌರ್ಜನ್ಯ ಮಿತಿ ಮೀರಿತ್ತು. ಪಾರ್ಲಿಮೆಂಟ್​ ಮತ್ತು ವಿಧಾನಸೌಧ ಸರ್ವಾಧಿಕಾರಿಗಳ ಆಟದ ಅಂಗಳವಾಗಿತ್ತು. ಕಾಂಗ್ರೆಸಿಗರು ಕಾನೂನನ್ನು ಕತ್ತೆ ಮಾಡಿದ್ದರು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.


ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್​ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ ಶೆಟ್ಟಿ ಮತ್ತು ದಿನಕರ ಶೆಟ್ಟಿ ಹೆರ್ಗ ಇದ್ದರು.

Ads on article

Advertise in articles 1

advertising articles 2

Advertise under the article