.jpg)
ಕೃಷ್ಣಮಠದಲ್ಲಿ ತಪ್ತ ಮುದ್ರಾಧಾರಣೆ
Wednesday, July 17, 2024
ಕೃಷ್ಣಮಠದಲ್ಲಿ ತಪ್ತ ಮುದ್ರಾಧಾರಣೆ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಸುದರ್ಶನ ಹೋಮದ ಅಗ್ನಿಯಲ್ಲಿ ಲೋಹದ ಶಂಖ ಚಕ್ರಗಳ ಮುದ್ರೆಗಳನ್ನು ಭುಜ, ಎದೆ, ತೋಳುಗಳಿಗೆ ಒತ್ತಿಸಿಕೊಳ್ಳುವ ಕ್ರಮ ತಪ್ತ ಮುದ್ರಾಧಾರಣೆಯಾಗಿದ್ದು, ಮಾಧ್ವ ಸಂಪ್ರದಾಯದಲ್ಲಿ ತಪ್ತ ಮುದ್ರಾಧಾರಣೆಗೆ ಬಹಳ ಮಹತ್ವ ಇದೆ.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮೊದಲಿಗೆ ಸ್ವತಃ ತಪ್ತ ಮುದ್ರಾಧಾರಣೆ ಮಾಡಿಕೊಂಡು ಬಳಿಕ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರಿಗೆ ಮುದ್ರಾಧಾರಣೆ ಮಾಡಿದರು.
ಶ್ರೀಕೃಷ್ಣನಿಗೆ ಅರ್ಜುನ ಮುದ್ರಾಯೋಗ ಅಲಂಕಾರ ಮಾಡಲಾಗಿತ್ತು.