.jpg)
ಪ್ರಧಾನಿ ಸಹೋದರ ಕೃಷ್ಣಮಠ ಭೇಟಿ
Thursday, November 7, 2024
ಲೋಕಬಂಧು ನ್ಯೂಸ್, ಉಡುಪಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಹಿರಿಯ ಸಹೋದರ ಸೋಮು ಭಾಯ್ ಮೋದಿ ಪತ್ನಿ ಚಂದ್ರಿಕಾ ಭಾಯ್ ಮೋದಿ ಜೊತೆಗೂಡಿ ಗುರುವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದೇವರ ದರ್ಶನ ಪಡೆದರು.
ಪುತ್ತಿಗೆ ಶ್ರೀಗಳು ನಡೆಸುತ್ತಿರುವ ಗೀತಾ ಲೇಖನ ಯಜ್ಞ, ಅವರು ವಿದೇಶಗಳಲ್ಲಿ ಕೃಷ್ಣ ಮಂದಿರ ಸ್ಥಾಪನೆ ಮತ್ತು ಕೃಷ್ಣ ತತ್ವ ಪ್ರಚಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಗೀತಾ ಲೇಖನ ಯಜ್ಞ ದೀಕ್ಷೆ ಪಡೆದರು.
ಗೀತಾ ಮಂದಿರದಲ್ಲಿ ನಡೆಯುತ್ತಿರುವ ಕಾರ್ತೀಕ ತುಳಸಿ ಸಂಕೀರ್ತನೆ ವೀಕ್ಷಿಸಿ, ಸಾಲುದೀಪ ಬೆಳಗಿದರು.
ಶ್ರೀಗಳು ಸೋಮು ಭಾಯ್ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀಗಳ ಗೀತಾ ಲೇಖನ ಯಜ್ಞ ಬಗ್ಗೆ ಪ್ರಧಾನಿ ಮೋದಿ ಶ್ಲಾಘಿಸಿ ಪುತ್ತಿಗೆ ಶ್ರೀಗಳಿಗೆ ಪತ್ರ ಬರೆದಿರುವುದನ್ನು ಸ್ಮರಿಸಿದರು.
ಸೋಮು ಅವರ ಆಪ್ತ, ಖ್ಯಾತ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್ ಕೂಡ್ಲು, ಸ್ನೇಹಿತ ಗೋವಿಂದ ಭಾಯ್, ಪುತ್ತಿಗೆ ಮಠ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ಸಂತೋಷ ಶೆಟ್ಟಿ ತಂಕರಗುತ್ತು ಮೊದಲಾದವರಿದ್ದರು.