-->
ಕೋಟಿ ಚೆನ್ನಯರ ನಡೆ ನುಡಿ ಶಾಶ್ವತ

ಕೋಟಿ ಚೆನ್ನಯರ ನಡೆ ನುಡಿ ಶಾಶ್ವತ

ಲೋಕಬಂಧು ನ್ಯೂಸ್
ಕಾರ್ಕಳ, ಫೆ.22: ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರು ಅಧರ್ಮದ ವಿರುದ್ಧ ನ್ಯಾಯದ ಪರವಾಗಿ ಹೋರಾಡಿದ ವೀರ ಪುರುಷರು. ಹಿರಿಯರಿಗೆ ಗೌರವ, ಶಿಷ್ಟರ ರಕ್ಷಣೆ ಮಾಡಿ, ಕೊಟ್ಟ ಮಾತನ್ನು ಉಳಿಸಿಕೊಂಡ ಕೋಟಿ-ಚೆನ್ನಯರ ಮೌಲ್ಯಯುತ ಜೀವನ ಇಂದಿಗೂ ಎಂದೆಂದಿಗೂ ಮೌಲ್ಯಯುತ ಎಂದು ಜ್ಞಾನಭಾರತ್ ಬಾಲಸಂಸ್ಕಾರದ ಕಾರ್ಯದರ್ಶಿ ಸಂಗೀತಾ ಕುಲಾಲ್ ಹೇಳಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವೃಂದದ ಸದಸ್ಯರಾದ ಉಷಾ ರಾವ್ ಯು., ಗಾಯತ್ರಿ ನಾಗೇಶ್, ಚೇತನಾ ಸಂದೀಪ್, ಅಕ್ಷತಾ ಹಾಗೂ ಲಕ್ಷ್ಮೀ ಇದ್ದರು.
ಬಾಲಸಂಸ್ಕಾರದ ಬಾಲಕ ಬ್ರಿಜೇಶ್ ನಿರೂಪಿಸಿ, ಆಯುಷ್ ಯು. ಶೆಟ್ಟಿ ವಂದಿಸಿದರು. ಆರಾಧ್ಯ ಶ್ರೀ ರಾಮರಕ್ಷಾ ಸ್ತೋತ್ರ ಹಾಗೂ ಪ್ರೇರಣಾ ಬೋರ್ಕರ್ ಭಗವದ್ಗೀತೆಯ ಮೊದಲ ಹತ್ತು ಶ್ಲೋಕ ವಾಚಿಸಿದರು.


ಬಾಲ ಸಂಸ್ಕಾರಕ್ಕೆ ಸೇರಲಿಚ್ಛಿಸುವ ಕಾರ್ಕಳ ತಾಲೂಕಿನ ಮಕ್ಕಳ ಪೋಷಕರು ಸಂಸ್ಥೆಯನ್ನು ಸಂಪರ್ಕಿಸಿ, ಮಕ್ಕಳ ಹೆಸರನ್ನು ಫೆ. 28ರೊಳಗಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9902192469ನ್ನು ಸಂಪರ್ಕಿಸಬಹುದು.

Ads on article

Advertise in articles 1

advertising articles 2

Advertise under the article