-->
ಕಲೆಗೆ ಜಾತಿಯ ಅಡ್ಡಿ ಇಲ್ಲ

ಕಲೆಗೆ ಜಾತಿಯ ಅಡ್ಡಿ ಇಲ್ಲ

ಲೋಕಬಂಧು ನ್ಯೂಸ್
ಉಡುಪಿ, ಫೆ.22: ಯಾವುದೇ ಕಲೆಗೆ ಜಾತಿಯ ಅಡ್ಡಿ ಇಲ್ಲ. ನಾನು ಯಕ್ಷಗಾನ ಕ್ಷೇತ್ರಕ್ಕೆ ಬಂದಾಗ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು ಎಂದು ಯಕ್ಷಗಾನ ಅರ್ಥದಾರಿ ಜಬ್ಬಾರ್ ಸಮೊ ಹೇಳಿದರು.ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಆರ್.ಆರ್.ಸಿ.ಯ ಧ್ವನ್ಯಾಲೋಕ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.


ನಾನು ಆರಂಭದಲ್ಲಿ ಸಂಘಟಕನಾಗಿ ಕೆಲಸ ಮಾಡಿದವ. ಆನಂತರ ಯಕ್ಷಗಾನ ತಾಳಮದ್ದಲೆ ಕ್ಷೇತ್ರಕ್ಕೆ ಕಾಲಿರಿಸಿದೆ. ಹಲವರ ಪ್ರೋತ್ಸಾಹದಿಂದ ಅದರಲ್ಲೇ ಮುಂದುವರಿದೆ ಎಂದರು.


ಯಕ್ಷಗಾನ ಕಲಾವಿದ ಪ್ರೊ.ಎಂ.ಎಲ್.ಸಾಮಗ ಮಾತನಾಡಿ, ಕಲೆಯ ಮೂಲಕ ಸಾಮರಸ್ಯ ಬೆಳೆಸಬಹುದು ಎಂಬುದನ್ನು ಜಬ್ಬಾರ್ ಸಮೊ ಮಾಡಿ ತೋರಿಸಿದ್ದಾರೆ. ನಿರರ್ಗಳತೆ ಹಾಗೂ ಸ್ವರ ಮಾಧುರ್ಯ ಜಬ್ಬಾರ್ ಅರ್ಥಗಾರಿಕೆಯತ್ತ ಜನರನ್ನು ಸೆಳೆಯುತ್ತದೆ ಎಂದರು.


ಕಾರ್ಯಕ್ರಮದಲ್ಲಿ ದಿ.ಮನೋರಮಾ ಭಟ್ ಅವರ `ಆಡಿಯೊ ನಾಟಕಗಳು' ಹಾಗೂ `ಸ್ವಯಂವರ' ಕೃತಿಗಳನ್ನು ಮುಳಿಯ ರಾಘವಯ್ಯ ಅನಾವರಣಗೊಳಿಸಿದರು.


ಶಿಕ್ಷಣ ತಜ್ಞ ಮಹಾಬಲೇಶ್ವರ ರಾವ್ ಮುಖ್ಯ ಅತಿಥಿಯಾಗಿದ್ದರು.


ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ನರಸಿಂಹಮೂತರ್ಿ ಆರ್. ಇದ್ದರು.


ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ ಶೆಟ್ಟಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article