
ಪಂಚಮಿ ಟ್ರಸ್ಟ್ ಬೆಳ್ಳಿಹಬ್ಬ ಆಮಂತ್ರಣ ಬಿಡುಗಡೆ
Friday, April 11, 2025
ಲೋಕಬಂಧು ನ್ಯೂಸ್
ಉಡುಪಿ: ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಇಲ್ಲಿನ ಪಂಚಮಿ ಟ್ರಸ್ಟ್ ಕಳೆದ 25 ವರ್ಷಗಳಿಂದ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮೇ 4ರಂದು ಬೆಳ್ಳಿಹಬ್ಬ ಆಚರಿಸುತ್ತಿದೆ. ಆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
ಪಂಚಮಿ ಟ್ರಸ್ಟ್ ಆಡಳಿತ ವಿಶ್ವಸ್ಥ ಎಂ.ಹರಿಶ್ಚಂದ್ರ, ಟ್ರಸ್ಟಿಗಳಾದ ಲಕ್ಷ್ಮೀ ಹರಿಶ್ಚಂದ್ರ ಹಾಗೂ ಪಂಚಮಿ ಉಪಸ್ಥಿತರಿದ್ದರು.