
ಕಾಂಗ್ರೆಸ್ ಸಮಿತಿ ಬ್ಲಾಕ್ ಅಧ್ಯಕ್ಷರ ಸಭೆ
Thursday, June 26, 2025
ಲೋಕಬಂಧು ನ್ಯೂಸ್, ಉಡುಪಿ
ಕೆಪಿಸಿಸಿಗೆ ಕೆಲವು ಮಾಹಿತಿ ಕಳಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ತುರ್ತು ಸಭೆ ಗುರುವಾರ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಗ್ರಾಮೀಣ ಮಟ್ಟದಲ್ಲಿ ಬೂತ್ ಮುಖ್ಯಸ್ಥರು ಮತ್ತು ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಪ್ರಮುಖರ ವಿವರ ಕೂಡಲೇ ಪಡೆದು ಕೆಪಿಸಿಸಿಗೆ ಕಳಿಸಬೇಕಾಗಿದೆ. ಖಾಲಿ ಇರುವ ಹಾಗೂ ನಿಷ್ಕ್ರಿಯರಾಗಿರುವವರನ್ನು ಬದಲಾಯಿಸಿ, ಬೇರೆಯವರನ್ನು ನೇಮಿಸಿ ವಿವರ ನೀಡುವಂತೆ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ತಿಳಿಸಿದರು.
ಬಿಜೆಪಿಯವರು ವಿನಾಕಾರಣ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಎಲ್ಲಾ ಕಾಂಗ್ರೆಸ್ ಪ್ರಮುಖರನ್ನು ಸೇರಿಸಿಕೊಂಡು ಎಲ್ಲಾ ಗ್ರಾಮ ಪಂಚಾಯತ್ ಮತ್ತು ಎಲ್ಲಾ ನಗರಸಭಾ ವಾರ್ಡ್'ಗಳಲ್ಲಿ ಹಂತ ಹಂತವಾಗಿ ಪ್ರತಿಭಟನೆ ಸಭೆ ನಡೆಸಿ ಕೇಂದ್ರ ಸರಕಾರದ ವೈಫಲ್ಯ, 9/11 ಸಮಸ್ಯೆ ಇತ್ಯಾದಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕಿ, ಅಂಕಿಅಂಶಗಳೊಂದಿಗೆ ವಿವರಿಸಲು ತೀರ್ಮಾನಿಸಲಾಗಿದ್ದು, ಆ ಬಗ್ಗೆ 25 ಮಂದಿ ಉತ್ತಮ ಭಾಷಣಕಾರರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ರಮೇಶ್ ಕಾಂಚನ್ ಉಡುಪಿ, ಶುಭದಾ ರಾವ್ ಕಾರ್ಕಳ, ಪ್ರದೀಪ್ ಕುಮಾರ್ ಶೆಟ್ಟಿ ವಂಡ್ಸೆ, ವೈ.ಸುಕುಮಾರ್ ಕಾಪು, ಗೋಪಿನಾಥ್ ಭಟ್ ಹೆಬ್ರಿ, ರಾಘವೇಂದ್ರ ಶೆಟ್ಟಿ ಬ್ರಹ್ಮಾವರ, ಅರವಿಂದ ಪೂಜಾರಿ ಬೈಂದೂರು ಇದ್ದರು.
ಜಿಲ್ಲಾ ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಕೆ.ಅಣ್ಣಯ್ಯ ಸೇರಿಗಾರ್ ಸ್ವಾಗತಿಸಿ, ಪರಿಶಿಷ್ಟ ಜಾತಿ ಜಿಲ್ಲಾ ಸಮಿತಿ ಅಧ್ಯಕ್ಷ ಜೈಕುಮಾರ್ ವಂದಿಸಿದರು.