.jpg)
Brahmavara: ಮಳೆ ಹಾನಿ ಪ್ರದೇಶಕ್ಕೆ ಭೇಟಿ
Saturday, July 26, 2025
ಲೋಕಬಂಧು ನ್ಯೂಸ್, ಬ್ರಹ್ಮಾವರ
`ಉಡುಪಿ ವಿಧಾನಸಭಾ ಕ್ಷೇತ್ರದ ಕೆಂಜೂರು ಮತ್ತು ವಾರಂಬಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶುಕ್ರವಾರ ಸುರಿದ ಭಾರೀ ಗಾಳಿ ಮಳೆ ಹಾಗೂ ಮರ ಬಿದ್ದು ಮನೆ ಕುಸಿತಗೊಂಡಿರುವ ಸ್ಥಳಗಳಿಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆಂಜೂರು ಗ್ರಾಮದ ಗೋಪಾಲ ನಾಯ್ಕ, ದಾಮೋದರ ನಾಯ್ಕ ಹಾಗೂ ವಾರಂಬಳ್ಳಿ ಗ್ರಾಮದ ಕಿಣಿಯರಬೆಟ್ಟುನಲ್ಲಿ ಮರ ಬಿದ್ದು ಹಾನಿಗೀಡಾದ ಗಿರಿಜಾ ಮತ್ತು ಯಶೋದ ಅವರ ಮನೆಗೆ ಭೇಟಿ ನೀಡಿ ಘಟನೆಯಿಂದ ಗಾಯಗೊಂಡವರ ಆರೋಗ್ಯ ವಿಚಾರಿಸಿ ವೈಯಕ್ತಿಕ ನೆಲೆಯಲ್ಲಿ ಪರಿಹಾರ ನೀಡಿದರು.
ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಳೆ ಹಾನಿಯಿಂದ ಉಂಟಾದ ಹಾನಿ ಬಗ್ಗೆ ತಕ್ಷಣ ವರದಿ ಮಾಡಿ ಪ್ರಾಕೃತಿಕ ವಿಕೋಪದಡಿ ಗರಿಷ್ಟ ಪರಿಹಾರ ಒದಗಿಸುವಂತೆ ಸ್ಥಳದಲ್ಲಿಯೇ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಸ್ಥಳೀಯರಾದ ನಿರಂಜನ್ ಶೆಟ್ಟಿ, ನಿಶಾನ್ ರೈ, ಆದರ್ಶ್ ಶೆಟ್ಟಿ ಕೆಂಜೂರು, ನಾಗೇಶ್ ನಾಯ್ಕ್, ರಮಾನಂದ ಶೆಟ್ಟಿ, ಉಷಾ ಪೂಜಾರಿ, ವಿನುತ್ ಶೆಟ್ಟಿ, ಹರೀಶ್ ಶೆಟ್ಟಿ ಕೆಂಜೂರು, ಲಕ್ಷ್ಮೀನಾರಾಯಣ ಮಲ್ಯ, ರವೀಂದ್ರ ಪೂಜಾರಿ, ಸುರೇಶ್ ನಾಯ್ಕ್, ಪುನೀತ್ ನಾಯ್ಕ್, ಸುರೇಂದ್ರ ನಾಯ್ಕ್, ನಾಗರಾಜ ಕುಲಾಲ್, ವಿಜಯೇಂದ್ರ ಕುಲಾಲ್ ಮೊದಲಾದವರಿದ್ದರು.