-->
Kaup: ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಿಕರಿಗೆ ಸಿಎಂ ಪರಿಹಾರ ಮೊತ್ತ ಮಂಜೂರು

Kaup: ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಿಕರಿಗೆ ಸಿಎಂ ಪರಿಹಾರ ಮೊತ್ತ ಮಂಜೂರು

ಲೋಕಬಂಧು ನ್ಯೂಸ್, ಕಾಪು
ಇಲ್ಲಿನ ಮಲ್ಲಾರು ಫಕೀರನಕಟ್ಟೆ ಗುಡ್ಡೆಗೇರಿ ಸಲಫಿ ಮಸೀದಿ ಬಳಿ ಗುಜರಿ ಅಂಗಡಿ ಮತ್ತು ಗೋದಾಮಿನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಮೊತ್ತವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಜೂರು ಮಾಡಿದ್ದಾರೆ.
2022ರ ಮಾ. 23ರಂದು ಸಂಭವಿಸಿದ ಘಟನೆಯಲ್ಲಿ ರಜಬ್‌ ಬ್ಯಾರಿ (47), ರಜಬ್‌ ಆಲಿ (40) ಮತ್ತು ನಯಾಜ್‌ (42) ಮೃತಪಟ್ಟಿದ್ದರು.

Ads on article

Advertise in articles 1

advertising articles 2

Advertise under the article