-->
Mangaluru: ಖೈದಿಯಿಂದ ಹಣ ಸುಲಿಗೆ ಮಾಡಿದ ಸಹ ಖೈದಿಗಳ ವಿರುದ್ಧ ಕೆ-ಕೋಕಾ ಕೇಸ್

Mangaluru: ಖೈದಿಯಿಂದ ಹಣ ಸುಲಿಗೆ ಮಾಡಿದ ಸಹ ಖೈದಿಗಳ ವಿರುದ್ಧ ಕೆ-ಕೋಕಾ ಕೇಸ್

ಲೋಕಬಂಧು ನ್ಯೂಸ್, ಮಂಗಳೂರು
ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಖೈದಿಗೆ ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿದ್ದ ನಾಲ್ವರು ಸಹ ಖೈದಿಗಳ ವಿರುದ್ಧ ಕೆ-ಕೋಕಾ ಕಾಯ್ದೆಯಡಿ ಕೇಸು ದಾಖಲಾಗಿದೆ.ಮಿಥುನ್ ಎಂಬಾತನಿಗೆ ಸಹ ಖೈದಿಗಳಾದ ಧನುಷ್ ಭಂಡಾರಿ, ಸಚಿನ್‌ ತಲಪಾಡಿ, ದಿಲೇಶ್ ಬಂಗೇರ ಮತ್ತು ಲಾಯಿ ವೇಗಸ್ ಜುಲೈ 9ರಂದು 50 ಸಾವಿರ ರೂ. ನೀಡುವಂತೆ ಹಲ್ಲೆ ಮಾಡಿದ್ದರು. ಬಳಿಕ ಆರೋಪಿಗಳು 2 ಮೊಬೈಲ್ ಸಂಖ್ಯೆಗೆ ಮಿಥುನ್ ಪತ್ನಿಯಿಂದ 20 ಸಾವಿರ ರೂ. ಫೋನ್ ಪೇ ಮೂಲಕ ಜಮಾ ಮಾಡಿಸಿಕೊಂಡಿದ್ದರು.


ಹಿರಿಯ ಪೊಲೀಸ್ ಅಧಿಕಾರಿಗಳು ಜೈಲಿನಲ್ಲಿ ಪರಿಶೀಲನೆ ನಡೆಸಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article