-->
Karkala: ಮಹಿಳೆ ವಿಚಾರದಲ್ಲಿ ಮರ್ಡರ್

Karkala: ಮಹಿಳೆ ವಿಚಾರದಲ್ಲಿ ಮರ್ಡರ್

ಲೋಕಬಂಧು ನ್ಯೂಸ್, ಕಾರ್ಕಳ
ಇಲ್ಲಿನ ಕುಂಟಲ್ಪಾಡಿಯಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪರೀಕ್ಷಿತ್ ಸಂಜೀವ್ ಗೌಡ ಬಂಧಿತ ಆರೋಪಿ. ನವೀನ್ ಪೂಜಾರಿ ಕೊಲೆಯಾದ ವ್ಯಕ್ತಿಯಾಗಿದ್ದು ಮಹಿಳೆ ವಿಚಾರದಲ್ಲಿ ಕೊಲೆ ನಡೆದಿದೆ ಎಂದು ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.ಆರೋಪಿಗೂ ಕೊಲೆಯಾದ ವ್ಯಕ್ತಿಗೂ ಪರಿಚಯ ಇದ್ದು, ಇಬ್ಬರೂ ವಿವಾಹಿತರಾಗಿದ್ದು, ಬೇರೆ ಬೇರೆ ಕಾರಣಗಳಿಂದ ಪತ್ನಿಯೊಂದಿಗೆ ಮುನಿಸಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.


ಈಮಧ್ಯೆ ಆರೋಪಿ ಪರೀಕ್ಷಿತ್ ಸಂಜೀವ್ ಗೌಡನ ಗೆಳತಿಯೊಂದಿಗೆ ಕೊಲೆಯಾದ ನವೀನ್‌ ಪೂಜಾರಿ ಪರಿಚಯ ಮಾಡಿಕೊಂಡಿದ್ದು ಇತ್ತೀಚೆಗೆ ಆತ್ಮೀಯತೆ ಹೆಚ್ಚಾಗಿತ್ತು. ಅವರಿಬ್ಬರು ಮತ್ತಷ್ಟು ಕ್ಲೋಸ್ ಆಗುತ್ತಿರುವುದನ್ನು ಸಹಿಸದ ಆರೋಪಿ ರಾತ್ರಿ ವೇಳೆ ಇರಿದು ಕೊಂದಿದ್ದಾನೆ.


ಈ ಸಂಬಂಧ ಸಾಕ್ಷ್ಯಗಳನ್ನು ಕಲೆಹಾಕಿ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಹರಿರಾಮ್ ಶಂಕ‌ರ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article