
JDS:ನೇಜಾರು ಪ್ರಕರಣ: ಜೆಡಿಎಸ್ ಸಾಂತ್ವನ
Thursday, November 23, 2023
ಉಡುಪಿ, ನ.23 (ಲೋಕಬಂಧು ವಾರ್ತೆ): ನೇಜಾರು ತೃಪ್ತಿ ಲೇಔಟ್ ನ ಒಂದೇ ಕುಟುಂಬದ ನಾಲ್ವರು ಹತ್ಯೆಗೀಡಾದ ಮನೆಗೆ ಭೇಟಿ ನೀಡಿದ ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಮತ್ತು ಪಕ್ಷ ನಾಯಕರು ಕುಟುಂಬಿಕರನ್ನು ಭೇಟಿಯಾಗಿ ಸಾಂತ್ವನ ಹೇಳಿ, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರಿಗೆ ಫೋನ್ ಕರೆಮಾಡಿ, ನೂರ್ ಮಹಮ್ಮದ್ ಅವರೊಂದಿಗೆ ಮಾತನಾಡಿಸಿ ಸಾಂತ್ವನ ತಿಳಿಸಿದರು.ಈ ಸಂದರ್ಭ ಉಡುಪಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ವಾಸುದೇವ ರಾವ್, ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ರಜಾಕ್ ಉಚ್ಚಿಲ, ಎಂ.ಟಿ. ವೆಂಕಟೇಶ್, ಉದಯ ಆರ್. ಶೆಟ್ಟಿ, ಮಹಮ್ಮದ್ ಆಶ್ರಫ್ ಪಡುಬಿದ್ರಿ , ಬಿ.ಕೆ. ಮಹಮ್ಮದ್, ಅಮಿರ್ ಶಿರ್ವ, ಯು. ಎ. ರಶೀದ್ ಇದ್ದರು.