-->
JDS:ನೇಜಾರು ಪ್ರಕರಣ: ಜೆಡಿಎಸ್ ಸಾಂತ್ವನ

JDS:ನೇಜಾರು ಪ್ರಕರಣ: ಜೆಡಿಎಸ್ ಸಾಂತ್ವನ

ಉಡುಪಿ, ನ.23 (ಲೋಕಬಂಧು ವಾರ್ತೆ): ನೇಜಾರು ತೃಪ್ತಿ ಲೇಔಟ್ ನ ಒಂದೇ ಕುಟುಂಬದ ನಾಲ್ವರು ಹತ್ಯೆಗೀಡಾದ ಮನೆಗೆ ಭೇಟಿ ನೀಡಿದ ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಮತ್ತು ಪಕ್ಷ ನಾಯಕರು ಕುಟುಂಬಿಕರನ್ನು ಭೇಟಿಯಾಗಿ ಸಾಂತ್ವನ ಹೇಳಿ, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರಿಗೆ ಫೋನ್ ಕರೆಮಾಡಿ, ನೂರ್ ಮಹಮ್ಮದ್ ಅವರೊಂದಿಗೆ ಮಾತನಾಡಿಸಿ ಸಾಂತ್ವನ ತಿಳಿಸಿದರು.
ಈ ಸಂದರ್ಭ ಉಡುಪಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ವಾಸುದೇವ ರಾವ್, ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ರಜಾಕ್ ಉಚ್ಚಿಲ, ಎಂ.ಟಿ. ವೆಂಕಟೇಶ್, ಉದಯ ಆರ್. ಶೆಟ್ಟಿ, ಮಹಮ್ಮದ್ ಆಶ್ರಫ್ ಪಡುಬಿದ್ರಿ , ಬಿ.ಕೆ. ಮಹಮ್ಮದ್, ಅಮಿರ್ ಶಿರ್ವ, ಯು. ಎ. ರಶೀದ್ ಇದ್ದರು.

Ads on article

Advertise in articles 1

advertising articles 2

Advertise under the article