ಲೋಕಬಂಧು ನ್ಯೂಸ್, ಉಡುಪಿ
ತುಳುಕೂಟ ಉಡುಪಿ ವತಿಯಿಂದ ನಗರದ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ನಿಟ್ಟೂರು ದಿ.ಸಂಜೀವ ಭಂಡಾರಿ ಸ್ಮರಣಾರ್ಥ 30ನೇ ವರ್ಷದ ತುಳು ಭಾವ ಗೀತೆ ಸ್ಪರ್ಧೆ ಆಯೋಜಿಸಲಾಯಿತು.
ಉದ್ಯಮಿ ಹರಿಪ್ರಸಾದ್ ರೈ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ಪರ್ಧೆಯನ್ನು ಉದ್ಘಾಟಿಸಿದರು.
ತುಳುಕೂಟ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು.
ಗೌರವಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ., ಸ್ಪರ್ಧೆಯ ಸಂಚಾಲಕ ಜಯರಾಮ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 'ಎದೆ ತುಂಬಿ ಹಾಡುವೆನು' ಸ್ಪರ್ಧೆಯಲ್ಲಿ ವಿಜೇತರಾಗಿರುವ ಆಕಾಶವಾಣಿ ಕಲಾವಿದೆ ಸಂಗೀತಾ ಬಾಲಚಂದ್ರ, ಬಾಲನಟಿ ವೈಷ್ಣವಿ ವಿಶ್ವನಾಥ್, ಬಾಲನಟ ಯಶಸ್ ಪಿ. ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಭಾವಗೀತೆ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಮಾಹೆ ರೇಡಿಯೋ ಮಣಿಪಾಲದ ಡಾ.ರಶ್ಮಿ ಅಮ್ಮೆಂಬಳ ಮುಖ್ಯ ಅತಿಥಿಯಾಗಿದ್ದರು. ತುಳುಕೂಟ ಉಪಾಧ್ಯಕ್ಷ ಭುವನಪ್ರಸಾದ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಇಂದ್ರಾಳಿ ಲಯನ್ಸ್ ಕ್ಲಬ್ ಅಧ್ಯಕ್ಷ ದಿವಾಕರ ಸನಿಲ್, ತುಳುಕೂಟ ಉಪಾಧ್ಯಕ್ಷೆ ಶೋಭಾ ಶೆಟ್ಟಿ, ಕ್ರಿಶ್ಚಿಯನ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಹೆಲೆನ್ ವಿ. ಸಾಲಿನ್ಸ್, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ರಘು ಇಡ್ಕಿದು, ಉದ್ಯಮಿ ದೀಪಕ್, ದಿವಾಕರ ಕಿಣಿ ಮಣಿಪಾಲ, ತುಳುಕೂಟದ ಸದಸ್ಯೆ ವಿದ್ಯಾ ಸರಸ್ವತಿ ಭಾವಗೀತೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು.
