-->
ಶ್ರೀಕೃಷ್ಣ ಮಹಾಭಿಷೇಕ ಸಂಪನ್ನ

ಶ್ರೀಕೃಷ್ಣ ಮಹಾಭಿಷೇಕ ಸಂಪನ್ನ

ಶ್ರೀಕೃಷ್ಣ ಮಹಾಭಿಷೇಕ ಸಂಪನ್ನ

ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ

ಶ್ರೀಕೃಷ್ಣ ಮಠದಲ್ಲಿ ವರ್ಷಂಪ್ರತಿ ಆಷಾಢ ಶುದ್ಧ ದಶಮಿಯಂದು ನಡೆಯುವ ವಾರ್ಷಿಕ ಮಹಾಭಿಷೇಕ ಮಂಗಳವಾರ ಸಂಪನ್ನಗೊಂಡಿತು.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮಹಾಭಿಷೇಕ ನಡೆಸಿದರು.
ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಭಾಗವಹಿಸಿದ್ದರು.
ಶ್ರೀಕೃಷ್ಣನಿಗೆ ಹಾಲು, ಮೊಸರು, ತುಪ್ಪ, ಜೇನು ಮತ್ತು ಸಕ್ಕರೆಯುಕ್ತವಾಗಿ ಪಂಚಾಮೃತ ಅಭಿಷೇಕ ನಡೆಸಲಾಯಿತು.


ಬಳಿಕ ಸೀಯಾಳ (ಎಳನೀರು) ಅಭಿಷೇಕ ನಡೆಸಲಾಯಿತು.


ಋತ್ವಿಕರು ವೇದಮಂತ್ರ, ವಿಷ್ಣು ಸಹಸ್ರನಾಮ ಇತ್ಯಾದಿಗಳನ್ನು ಪಠಿಸಿದರು.
ಶ್ರೀಕೃಷ್ಣನಿಗೆ ಪಟ್ಟಾಭಿಕೃಷ್ಣ ಅಲಂಕಾರ ಮಾಡಲಾಗಿತ್ತು.


ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

Ads on article

Advertise in articles 1

advertising articles 2

Advertise under the article