-->
Parkala: ತೆನೆಪೂಜೆ ಸಂಪನ್ನ

Parkala: ತೆನೆಪೂಜೆ ಸಂಪನ್ನ

ಲೋಕಬಂಧು ನ್ಯೂಸ್, ಉಡುಪಿ
ನವರಾತ್ರಿ ಪರ್ವಕಾಲದಲ್ಲಿ ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ತೆನೆ (ಕದಿರು) ಕಟ್ಟುವ ಹಬ್ಬವನ್ನು ಸೋಮವಾರ ಆಚರಿಸಲಾಯಿತು.
ಗದ್ದೆಗಳಿಂದ ಭತ್ತದ ತೆನೆಗಳನ್ನು ವಿಜೃಂಭಣೆಯಿಂದ ದೇವಳಕ್ಕೆ ತಂದು ಪೂಜಿಸಿ, ನಂತರ ಸಾರ್ವಜನಿಕರಿಗೆ ವಿತರಿಸಲಾಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರಾದ ಶ್ರೀನಿವಾಸ ಉಪಾಧ್ಯಾಯ, ಮುರಳೀಧರ ನಕ್ಷತ್ರಿ, ಮಂಜುನಾಥ ಉಪಾಧ್ಯಾಯ, ನಟರಾಜ್ ಪರ್ಕಳ, ಸುಧಾಕರ ಪೂಜಾರಿ, ಕೀರ್ತಿ ಮೊದಲಾದವರಿದ್ದರು.


ಪರ್ಕಳ, ಮಣಿಪಾಲ, ಸರಳಬೆಟ್ಟು ಮತ್ತು ಬಡಗಬೆಟ್ಟು ಪರಿಸರದ ಸಾರ್ವಜನಿಕರು ಪಾಲ್ಗೊಂಡಿದ್ದರು.

Ads on article

Advertise in articles 1

advertising articles 2

Advertise under the article