ಗೌಜಿ ಈವೆಂಟ್‌ನ ಅಭಿಷೇಕ್ ಅಪಘಾತದಲ್ಲಿ ನಿಧನ

ಲೋಕಬಂಧು ನ್ಯೂಸ್, ಪಡುಬಿದ್ರಿ
ಮಂಗಳೂರಿನ ಖ್ಯಾತ ಗೌಜಿ ಈವೆಂಟ್‌ನ ಮಾಲಕ ಅಭಿಷೇಕ್ ಬುಧವಾರ ಪಡುಬಿದ್ರಿ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಡಿ.10ರಂದು ಬೆಳಗಿನ ಜಾವ 2.20ರ ಸುಮಾರಿಗೆ ಪಡುಬಿದ್ರಿ ಹೆದ್ದಾರಿ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.


ಅಪಘಾತದಲ್ಲಿ ಗಾಯಗೊಂಡ ಅಭಿಷೇಕ್ ಅವರನ್ನು ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಅಭಿಷೇಕ್ ಕೊನೆಯುಸಿರೆಳೆದರು.