ಜೀವ ವಿಮಾ ನೌಕರರ ಸಂಘದ ಸಮ್ಮೇಳನ

ಲೋಕಬಂಧು ನ್ಯೂಸ್, ಉಡುಪಿ
ಅಖಿಲ ಭಾರತ ಜೀವ ವಿಮಾ ನೌಕರರ ಸಂಘ (ಆಲ್​ ಇಂಡಿಯಾ ಲೈಫ್​) ದ 27ನೇ ರಾಷ್ಟ್ರ ಮಟ್ಟದ ದ್ವೈವಾರ್ಷಿಕ ಸಮ್ಮೇಳನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಕರಾವಳಿ ಜಂಕ್ಷನ್​ ಬಳಿಯ ಮಣಿಪಾಲ ಇನ್ ರಂಜಿತಾ ಪ್ಯಾಲೆಸ್​ನಲ್ಲಿ  ನಡೆದ ಎರಡು ದಿನಗಳ ಸಮ್ಮೇಳನವನ್ನು ಭಾರತೀಯ ಮಜ್ದೂರ್​ ಸಂಘ (ಬಿಎಂಎಸ್​)ದ ವಿಮಾ ವಲಯದ ಉಸ್ತುವಾರಿ ಸೋಮೇಶ್​ ಬಿಸ್ವಾಸ್​ ಉದ್ಘಾಟಿಸಿದರು.
ಕಾರ್ಮಿಕ ಹಿತದೊಂದಿಗೆ ರಾಷ್ಟ್ರ ಹಿತ ಎಂಬ ಆಶಯದೊಂದಿಗೆ ಕಳೆದ 7 ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ತಮ್ಮ ಸಂಘಟನೆ, ಸಂಸ್ಥೆಯ ನೌಕರರ ಹಿತ ಕಾಪಾಡುವಲ್ಲಿ ಆದ್ಯತೆ ನೀಡುತ್ತಿದೆ. ನೌಕರರು ತಮ್ಮ ಕರ್ತವ್ಯದ ಸಮರ್ಥ ನಿರ್ವಹಣೆ ಜೊತೆಗೆ ಹಕ್ಕುಗಳ ಬಗ್ಗೆ ಹೋರಾಡಬೇಕು ಎಂದು ಬಿಸ್ವಾಸ್ ಕಿವಿಮಾತು ಹೇಳಿದರು.
ಆಲ್​ ಇಂಡಿಯಾ ಲೈಫ್​ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ರಾಕೇಶ್ ಲಕ್ಡಾವಾಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.


ಸಂಘದ ವಿಭಾಗೀಯ ಕಾರ್ಯದರ್ಶಿ ಕವಿತಾ ಉದಯ್​ಶಂಕರ್​, ಜಿಲ್ಲಾಧ್ಯಕ್ಷ ಲಕ್ಷ್ಮಣ್, ಸಂಘಟನೆ ಕೋಶಾಧಿಕಾರಿ ಬಾಲಕೃಷ್ಣ ಶೆಣೈ ಉಪಸ್ಥಿತರಿದ್ದರು.


ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ವೇಗಸ್​ ಸ್ವಾಗತಿಸಿ, ಸಮ್ಮೇಳನದಲ್ಲಿ ಎಲ್​ಐಸಿ ನೌಕರರು ಮತ್ತು ಎಲ್​ಐಸಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮುಖ್ಯವಾಗಿ ಡಿಜಿಟಲೀಕರಣ ‌ಮತ್ತು ಡಿ ಗ್ರೂಪ್ ಹುದ್ದೆಗಳ ನೇಮಕಾತಿ ಬಗ್ಗೆ ಚರ್ಚಿಸಲಾಗುವುದು ಎಂದರು.  ಸಿತಾರಾ ನಿರೂಪಿಸಿದರು.


ದೇಶದಾದ್ಯಂತದ ಎಲ್ಐಸಿಯ 150ಕ್ಕೂ ಅಧಿಕ ಪದಾಧಿಕಾರಿಗಳು ಭಾಗವಹಿಸಿದ್ದಾರೆ.