Harihara Kavi: ಭಕ್ತ ಕವಿ ಹರಿಹರ
Thursday, November 23, 2023
12ನೆಯ ಶತಮಾನದ ಉತ್ತರಾರ್ಧದಲ್ಲಿ ಬದುಕಿದ್ದ ಶೈವಕವಿ ಹರಹರ, ಹೊಯ್ಸಳ ರಾಜ ನರಸಿಂಹ ಬಲ್ಲಾಳನಲ್ಲಿ ಕರಣಿಕ ವೃತ್ತಿಯನ್ನು ಮಾಡಿಕೊಂಡಿದ್ದ.
ಹನ್ನೆರಡನೆಯ ಶತಮಾನದ ಶರಣ ಚಳವಳಿ ಮತ್ತು ವಚನ ಸಾಹಿತ್ಯಗಳು ಹರಿಹರನ ಮೇಲೆ ಮಹತ್ತರ ಪ್ರಭಾವ ಬೀರಿತ್ತು. ಮೂಲತಃ ಭಕ್ತ ಕವಿಯಾಗಿದ್ದ ಆತನ ಕಾವ್ಯಗಳು ಭಕ್ತಿ ಪ್ರಧಾನವಾಗಿವೆ.
ಹಂಪೆಯ ಶ್ರೀ ವಿರೂಪಾಕ್ಷನಲ್ಲಿ ಹೊಂದಿರುವ ಅಪಾರ ಭಕ್ತಿ ಆತನ ಎರಡೂ ಶತಕಗಳಲ್ಲಿ ಹೊರಹೊಮ್ಮಿವೆ. ಆತನ ಶಿವಗಣದ ರಗಳೆಗಳಲ್ಲಿ ಶಿವಶರಣರ ಶಿವಭಕ್ತಿಯ ಚಿತ್ರಣವಿದೆ.
ಗಿರಿಜಾ ಕಲ್ಯಾಣ ಎಂಬ ಚಂಪೂಕಾವ್ಯ, ಪಂಪಾಶತಕ, ರಕ್ಷಾಶತಕ, ಮುಡಿಗೆಯ ಅಷ್ಟಕ ಈತನ ಪ್ರಮುಖ ಕೃತಿಗಳು.
ಶಿವ ಶರಣರ ರಗಳೆಗಳು (ಅವುಗಳಲ್ಲಿ ವಿಶೇಷವಾಗಿ 63 ಪುರಾತನ ಶಿವ ಶರಣರ ರಗಳೆಗಳೂ ಸೇರಿವೆ)
ಬಸವರಾಜದೇವರ ರಗಳೆ, ತಿರುನೀಲಕಂಠದೇವರ ರಗಳೆ, ನಂಬಿಯಣ್ಣನ ರಗಳೆ, ಮಹಾದೇವಿಯಕ್ಕನ ರಗಳೆ, ಪ್ರಭುದೇವರ ರಗಳೆ, ಕುಂಬಾರ ಗುಂಡಯ್ಯನ ರಗಳೆ, ಮಾದಾರ ಚೆನ್ನಯ್ಯನ ರಗಳೆ, ಇಳೆಯಾಂಡ ಗುಡಿಮಾರನ ರಗಳೆ ಮತ್ತು ರೇವಣಸಿದ್ಧೇಶ್ವರ ರಗಳೆಗಳು ಹರಿಹರನ ಪ್ರಮುಖ ರಗಳೆಗಳು.
ಆತನ ಕಾವ್ಯಾತ್ಮಕ ಕೃತಿಗಳಿಗಾಗಿ ಉತ್ಸಾಹದ ಕವಿ (ಉತ್ಸವ ಕವಿ) ಎಂದು ಗೌರವಿಸಲ್ಪಟ್ಟಿದ್ದಾನೆ.