ಕೃಷ್ಣಮಠದಲ್ಲಿ ಋಕ್ ಸಂಹಿತಾ ಯಾಗ ಆರಂಭ

ಲೋಕಬಂಧು ನ್ಯೂಸ್ | ಉಡುಪಿ, ಮಾ.20
ಪರ್ಯಾಯ ಶೀರೂರು ಮಠ  ಆಶ್ರಯದಲ್ಲಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ಶ್ರೀ ರಾಮೋತ್ಸವ ಅಂಗವಾಗಿ  ಋಕ್ ಸಂಹಿತಾ ಯಾಗ ಶುಕ್ರವಾರ ಆರಂಭಗೊಂಡಿತು.
ಪೂರ್ವಭಾವಿಯಾಗಿ ಪರ್ಯಾಯ ಪೀಠಾಧೀಶ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶುಕ್ರವಾರ ಪ್ರಾರ್ಥನೆ ನಡೆದು ಆನಂತರ ಅರಣಿ ಮಥನದ ಮೂಲಕ ಯಾಗ ಪ್ರಾರಂಭವಾಯಿತು.