ಲೋಕಬಂಧು ವಾರ್ತೆ
ಸೋಮವಾರ, ಸೆಪ್ಟೆಂಬರ್ 11
ಮೈತ್ರಿ ಮುಟ್ಟಿನ ಕಪ್ ರಾಯಭಾರಿಯಾಗಿ ಸಪ್ತಮಿ ಗೌಡ
ಮಂಗಳೂರು: ರಾಜ್ಯ ಸರಕಾರದ ಮೈತ್ರಿ ಮುಟ್ಟಿನ ಕಪ್ ಯೋಜನೆಯ ರಾಯಭಾರಿಯಾಗಿ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ನೇಮಕಗೊಂಡಿದ್ದಾರೆ.
ಇಲ್ಲಿನ ಕೇಂದ್ರ ಮೈದಾನದಲ್ಲಿ ಸೋಮವಾರ ನಡೆದ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಯೋಜನೆ ಕುರಿತಂತೆ ಮಾತನಾಡಿದ ಸಪ್ತಮಿ ಗೌಡ, ಇಂದು ಸ್ತ್ರೀಯರು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮುಟ್ಟಿನ ಕಾರಣಕ್ಕೆ ನಮ್ಮ ಸಹೋದರಿಯರು ಸಾಧನೆಯಲ್ಲಿ ಹಿಂದೆ ಬೀಳ ಬಾರದು.
ಮುಟ್ಟಿನ ಕಪ್ ಇಂದು ನಮಗೆ ಹೊಸ ಭರವಸೆ ಮೂಡಿಸಿದೆ. ಅದನ್ನು ಹೆಚ್ಚು ಹೆಚ್ಚು ಬಳಕೆ ಮಾಡುವ ಮೂಲಕ ಪರಿಸರ ಸ್ನೇಹಿಗಳಾಗಬೇಕು.
ಹೆಣ್ಣುಮಕ್ಕಳು ಸ್ಯಾನಿಟರಿ ಪ್ಯಾಡ್ ಬದಲಾಗಿ ಮುಟ್ಟಿನ ಕಪ್ ಬಳಕೆಗೆ ಒಲವು ತೋರುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಮೈತ್ರಿ ಯೋಜನೆಯ ರಾಯಭಾರಿಯಾಗಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದ ಅವರು, ನಾನು ಕ್ರೀಡಾ ಪಟು. ಮುಟ್ಟಿನ ಕಪ್ ಬಳಕೆ ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಆತ್ಮಸ್ಥೆರ್ಯವನ್ನು ಇಮ್ಮಡಿ ಮಾಡಿದೆ.
ನನ್ನ ತಾಯಿಯೇ ಮುಟ್ಟಿನ ಕಪ್ ಬಳಕೆ ಮಾಡುವಂತೆ ಪ್ರೇರೇಪಿಸಿದರು. ಈ ಯೋಜನೆಯಲ್ಲಿ ತಾಯಂದಿರನ್ನು ಜಾಗೃತಿಗೊಳಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು
