ಲೋಕಬಂಧು ನ್ಯೂಸ್ ಲಖನೌ, ಜು.25
ಅಯೋಧ್ಯೆಯ ಶ್ರೀರಾಮ ಮಂದಿರದ ಧಾರ್ಮಿಕ ಕಾರ್ಯಗಳನ್ನು ನಿರ್ವಹಣೆ ಮಾಡಲು ರಚಿಸಲಾಗಿರುವ 9 ಮಂದಿಯ ಸಂತರ ಸಮಿತಿಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೂ ಸ್ಥಾನ ಲಭಿಸಿದೆ.ಮಂದಿರ ಟ್ರಸ್ಟ್ ಒಪ್ಪಿಗೆ ಸೂಚಿಸಿರುವ ಈ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಮಹಾಂತ ನೃತ್ಯ ಗೋವಿಂದ ದೇವ್ ಗಿರಿ ಮಹಾರಾಜ್ ವಹಿಸಿಕೊಂಡಿದ್ದಾರೆ.
ಸಮಿತಿಯಲ್ಲಿ ಜಗದ್ಗುರು ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿ, ನಿರ್ಮೋಹಿ ಅಖಾಡದ ದಿನೇಂದ್ರ ದಾಸ್, ಮುನಿರಾಮ್ ಚವಾನಿಯ ಕಮಲನಯನ ದಾಸ್, ರಾಮವಲ್ಲಭ ಕುಂಜ್'ನ ರಾಜ್ ಕುಮಾರ್ ದಾಸ್, ರಾಮಕಥಾ ಕುಂಜ್'ನ ರಾಮಾನಂದ ದಾಸ್ ಸೇರಿ ಇತರರು ಸ್ಥಾನ ಪಡೆದುಕೊಂಡಿದ್ದಾರೆ.