ಅಶ್ವತ್ಥಪುರದಲ್ಲಿ ತುಳಸಿ ಅರ್ಚನೆ

ಲೋಕಬಂಧು ನ್ಯೂಸ್ ಮೂಡುಬಿದಿರೆ, ಜು.25
ಅಷಾಢ ಏಕಾದಶಿ ಅಂಗವಾಗಿ ಶ್ರೀಕ್ಷೇತ್ರ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶನಿವಾರ ಸಹಸ್ರ ತುಳಸಿ ಅರ್ಚನೆ ನಡೆಯಿತು.
ಶ್ರೀ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕ್ಷೇತ್ರದಲ್ಲಿ ನಡೆಯುತ್ತಿರುವ ಆಷಾಢ ನಾಮ ಸಪ್ತಾಹ ಅಂಗವಾಗಿ ಅಖಂಡ ರಾಮನಾಮ‌ ಸಪ್ತಾಹ, ವಿಶೇಷ ಪೂಜೆ ನಡೆಯಿತು.