ಲೋಕಬಂಧು ನ್ಯೂಸ್ | ಉಡುಪಿ, ಸೆ.2
ಕೇರಳ ಸಮಾಜಂ ಉಡುಪಿ ವತಿಯಿಂದ ದ್ವಿತೀಯ ವರ್ಷದ ಓಣಂ ಸಂಭ್ರಮಾಚರಣೆ ಸೆಪ್ಟೆಂಬರ್ 6ರಂದು ಅಂಬಾಗಿಲು ಅಮೃತ್ ಗಾರ್ಡನ್ ಸಭಾಭವನದಲ್ಲಿ ನಡೆಯಲಿದೆ ಎಂದು ಕೇರಳ ಸಮಾಜಂ ಉಡುಪಿ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್, ಮಣಿಪಾಲ ಕೆಎಂಸಿ ಅಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಶ್ಯಾಮ್ ಕೆ. ಅಶೋಕ್ ,ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಟ್ರಸ್ಟಿ ಅಭಿಲಾಷ್ ಪಿ.ವಿ., ಕೇರಳ ಸಮಾಜಂ ಮಂಗಳೂರು ಅಧ್ಯಕ್ಷ ಟಿ.ಕೆ. ರಾಜನ್, ಮಾಲಯಾಳಂ ಸಿನಿಮಾ ನಟಿಯರಾದ ಸುಚಿತ್ರ ನಾಯರ್ ಮತ್ತು ನೀನಾ ಕುರುಪ್ ಹಾಗೂ ಬಾಲ ಕಲಾವಿದೆ ಗಾಯಕಿ ರಾನಿಯ ರಫೀಕ್ ಭಾಗವಹಿಸಲಿದ್ದಾರೆ.
ಪೂಕಳಂ ಸ್ಪರ್ಧೆ, ಮಕ್ಕಳಿಗಾಗಿ ಓಣಂ ಆಟಗಳು, ಕೇರಳ ಸಮಾಜಂ ಸದಸ್ಯರಿಂದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು, ಕಳರಿಪಾಯಟ್ಟು ಪ್ರದರ್ಶನ ಜೊತೆಗೆ ಮಧ್ಯಾಹ್ನ ಕೇರಳದ ವಿಶೇಷ 'ಓಣಂ ಸಧ್ಯ' ಭೋಜನ ಕೂಟ ನಡೆಯಲಿದೆ.
ಕೇರಳದ ಸಾಂಪ್ರದಾಯಿಕ ಓಣಂ ಅಚರಣೆ, ಕಲೆ, ಸಂಸ್ಕೃತಿ, ಅಲ್ಲಿನ ಆಹಾರ ಪದ್ಧತಿ ಇತ್ಯಾದಿಗಳನ್ನು ಕರಾವಳಿಯ ಜನರಿಗೆ ಪರಿಚಯಿಸುವ ಉದ್ದೇಶ ಈ ಕಾರ್ಯಕ್ರಮದ ಆಶಯ ಎಂದು ಕೇರಳ ಸಮಾಜಂ ಅಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಹಾಗೂ ಪದಾಧಿಕಾರಿಗಳಾದ ಪ್ರೊ.ಡಾ.ಬಿನ್ಸಿ, ಎಂ.ಜಾರ್ಜ್, ಎಸ್.ವಸಂತ್ ಕುಮಾರ್, ಶ್ರೀಕುಮಾರ್, ರಮೇಶ್ ಇ.ಪಿ. ಮತ್ತು ಪ್ರಶಾಂತ್ ಜಿ. ತಿಳಿಸಿದ್ದಾರೆ.
